ತೆಪ್ಪದಲ್ಲಿ ಫ್ರೀ ವೆಡ್ಡಿಂಗ್ ಶೂಟ್, ಹಸೆಮಣೆಗೆ ಏರಲಿರುವ ನವ ಜೋಡಿಗಳು ನೀರುಪಾಲು  

ಮದುವೆ ಅನ್ನೋ ಮೂರಕ್ಷರ ಕೇಳಿದ್ರೇ ಸಾಕು ಮುಖದಲ್ಲಿ ಅದೇನೋ ಒಂಥರಾ ಖುಷಿಯಾಗುತ್ತೆ ಅಲ್ವಾ.ಆ ಹುಡುಗ ಹುಡುಗಿ ನೂರಾರು ಕನಸನ್ನ ಕಟ್ಟಿಕೊಂಡು ಮದುವೆಗೆ ರೆಡಿಯಾಗಿದ್ರು. ಇನ್ನೇನು ಕೆಲವೇ ದಿನಗಳಲ್ಲಿ ಅವರಿಬ್ಬರ ತಲೆ ಮೇಲೆ ಅಕ್ಷತೆ ಕಾಳು ಬೀಳುವ ಮುನ್ನವೇ ಅವರಿಬ್ಬರ ಪ್ರಾಣಪಕ್ಷಿ ಹಾರಿಗೋಗಿತ್ತು.  ಹೌದು ಇತ್ತೀಚಿನ ದಿನಗಳಲ್ಲಿ ಮದುವೆ ಫ್ರೀ  ವೆಡ್ಡಿಂಗ್ ಶೂಟ್ ಎನ್ನುವುದು ಟ್ರೇಂಡ್ ಆಗಿಬಿಟ್ಟಿದೆ. 

ಪ್ರಿ ವೆಂಡ್ಡಿಂಗ್ ಶೂಟ್  ವೇಳೆ ತೆಪ್ಪ ಮುಳುಗಿ ಮದುವೆಯಾಗ ಬೇಕಿದ್ದ ಹುಡುಗ ಹುಡುಗಿ ಸಾವನ್ನಪ್ಪಿರುವ ಘಟನೆ ತಲಕಾಡಿನಲ್ಲಿ ನಡೆದಿದೆ. ಮದುಮಗ ಕಿತ್ತಲೆ ಹಣ್ಣಿನ ಬಟ್ಟೆ ಧರಿಸಿ, ಮದುಮಗಳು ಹಸಿರು ಬಣ್ಣದ ಬಟ್ಟೆ ತೊಟ್ಟು ಕಲರ್ ಫುಲ್ ಆಗಿ ರೆಡಿಯಾಗಿ, ನದಿಯ ಒಳಗೆ ತೆಪ್ಪದಲ್ಲಿ ನಿಂತು ವಿದವಿಧದ ಫೋಟೋ ತೆಗೆಸಿ ಕೊಳ್ಳಬೇಕಿತ್ತು. 

ಆದರೇ ಅಲ್ಲಿ ನಡೆದಿದ್ದು ಮಾತ್ರ ಮನ ಮಿಡಿ ಯುವ ಧಾರುಣ ಘಟನೆ.  ಮೈಸೂರಿನ ಕ್ಯಾತಮಾರನಹಳ್ಳಿಯ ಚಂದ್ರ ಮತ್ತು ಶಶಿಕಲಾಗೆ ಮದುವೆ ಫಿಕ್ಸ್ ಆಗಿತ್ತು. ಮದುವೆಗೆ ಮುನ್ನ ಪ್ರಿ ವೆಡ್ಡಿಂಗ್ ಶೂಟ್ ಗಾಗಿ ತಲಕಾಡಿನ ಕಾವೇರಿ ನದಿಗೆ ತೆರಳಿದ್ದರು. ತೆಪ್ಪದಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ವೇಳೆ ಆಯ ತಪ್ಪಿ ತೆಪ್ಪ ಮುಳುಗಿದೆ.

ಚಂದ್ರ ಮತ್ತು ಶಶಿಕಲಾ ನೀರು ಪಾಲಾಗಿದ್ದಾರೆ. ಶವವಾಗಿರುವ ಮಗಳನ್ನ ನೋಡಿ ತಾಯಿ ಕಣ್ಣೀರಿಡುತ್ತಿದ್ದ ದೃಶ್ಯ ಎಲ್ಲರ ಮನಕಲಕು ವಂತಿತ್ತು. ವಿಷಯ ತಿಳಿದ ತಲಕಾಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 

 
 
 
 
 
 
 
 
 
 
 

Leave a Reply