ನವದೆಹಲಿಯಲ್ಲಿ ಕೇಂದ್ರ ಮಂತ್ರಿಗಳಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಶ್ರೀಪುತ್ತಿಗೆ ಮಠದ ಪೀಠಾಧಿಪತಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರ ದೆಹಲಿ ಪ್ರವಾಸದ ಹಾಗೂ ಪರ್ಯಾಯದ ಯೋಜನೆಗಳನ್ನು ವಿವರಿಸಲಾಯಿತು. ಶ್ರೀಗಳವರ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ತಿಳಿಸಿದರು. ಗೋಪಾಲ ಆಚಾರ್ಯರವರು ಪರ್ಯಾಯದ ಯೋಜನೆಗಳ ಮಾಹಿತಿ ನೀಡಿದರು.