ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದ ಎದುರುಗಡೆ ಇರುವ ತೆಂಕಪೇಟೆ ಗೆಳೆಯರ ಬಳಗ ವತಿಯಿಂದ ಶನಿವಾರ ಉಡುಪಿಯ ಜನಪ್ರಿಯ ಶಾಸಕರಾದ ಯಶ್ಪಾಲ್ ಸುವರ್ಣ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಬಳಿಕ ಕಂಪೆನಿ ಸೆಕ್ರೆಟರಿ ಪರೀಕ್ಷೆಯಲ್ಲಿ ರಾಂಕ್ ಗಳಿಸಿದ ಮೂವರು ವಿದ್ಯಾರ್ಥಿಗಳಾದ ಕುಮಾರಿ ಕೆ. ಪ್ರತೀಕ್ಷಾ ಪ್ಯೆ, ಕುಮಾರಿ ಎಮ್. ಪದ್ಮಶ್ರೀ ಪ್ಯೆ, ಕುಮಾರಿ ಸಹನಾ ಕಾಮತ್ ಇವರನ್ನು ಶಾಸಕರಾದ ಯಶ್ಪಾಲ್ ಸುವರ್ಣ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿ ಹಿತ ನುಡಿಗಳನ್ನಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಶ್ರೀ ಕೆ. ಅಶೋಕ್ ಕಾಮತ್, ಕೆ. ರಾಜಾರಾಂ ಪ್ಯೆ, ಸುಧೀರ್ ಭಟ್, ಎಮ್. ದೇವದಾಸ್ ಪೈ, ಮಾಜಿ ನಗರಸಭಾ ಸದಸ್ಯರಾದ ಪಿ. ಶ್ಯಾಂ ಪ್ರಸಾದ್ ಕುಡ್ವ್, ರಾಮದಾಸ್ ಪಿ. ಪ್ಯೆ, ಕೆ. ಜಯರಾಂ ಕಾಮತ್, , ಸಂಜಯ್ ನಾಯಕ್ , ಜಿ. ಸತೀಶ್ ನಾಯಕ್, ಪಿ. ಮಹೇಶ್ ಕುಡ್ವ, ಕೆ. ರಮೇಶ್ ನಾಯಕ್, ಟಿ. ಗಣೇಶ್ ಶೆಣೈ, ಯು. ಅಜಿತ್ ಶೆಣೈ, ಕೆ. ದೀಪಕ್ ಶಾನುಭಾಗ್, ಎ. ರಮೇಶ್ ನಾಯಕ್, ರೋಹಿದಾಸ್ ಪ್ಯೆ, ಯು. ಪ್ರಶಾಂತ್ ರಾವ್, ಕೆ. ಶ್ರೀನಿವಾಸ ಶೆಣೈ, ಎಸ್. ಶ್ರೀಕಾಂತ್ ಪ್ಯೆ, ಕೆ. ಪುಂಡಲೀಕ ಪ್ರಭು, ಪಿ. ಸದಾನಂದ ಶೆಣೈ, ವಿನಾಯಕ ಬಾಳಿಗಾ, ಮಹಿಳಾ ಪ್ರಮುಖರಾದ ಶ್ರೀಮತಿ ಎ. ಪುಷ್ಪಾ ಭಟ್, ಯು. ಶಕುಂತಲಾ ಶೆಣೈ, ಎ. ಸ್ಯೌಜನ್ಯ ಕಿಣಿ, ಕರುಣಾ ಎಸ್. ಪ್ಯೆ ಮತ್ತು ವಿಧ್ಯಾರ್ಥಿನಿಯರ ಪೋಷಕರು, ಸಮಾಜ ಭಾಂದವರು ಉಪಸ್ಥಿತರಿದ್ದರು.