ಉಡುಪಿ: ಚುನಾವಣಾ ಕರ್ತವ್ಯ ನಿರ್ಲಕ್ಷ್ಯ; ಅಧಿಕಾರಿ ಅಮಾನತು!

ಉಡುಪಿ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಗೆ, 120 ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಟಪಾಡಿ, ಹಂದಾಡಿ, ಕುಮ್ರಗೋಡು ಮತ್ತು ವಾರಂಬಳ್ಳಿ ಮತಗಟ್ಟೆಗಳಿಗೆ ಜಿಲ್ಲಾ
ಚುನಾವಣಾಧಿಕಾರಿಯವರು, ಸೆಕ್ಟರ್ ಅಧಿಕಾರಿಯಾಗಿ ಕೆ.ಪಿ. ದಯಾನಂದ ಜವಳಿ ಪ್ರವರ್ದನಾಧಿಕಾರಿ, ಕೈಮಗ್ಗ ಮತ್ತು ಜವಳಿ
ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಇವರನ್ನು ನೇಮಕ ಮಾಡಿ ಅದೇಶಿಸಲಾಗಿತ್ತು.
ಸದ್ರಿ ಕೆ.ಪಿ. ದಯಾನಂದ್ ಅವರು ಚುನಾವಣಾ ಕರ್ತವ್ಯಕ್ಕೆ ಹಾಜರಾದಗೇ ನಿರ್ಲಕ್ಷ್ಯ ವಹಿಸಿ ದುರ್ನಡತೆ ತೋರಿರುತ್ತಾರೆ.
ಈ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡಿದ್ದರೂ ಸಹ ಯಾವುದೇ ವಿವರಣೆ ನೀಡದೇ ಸೆಕ್ಟರ್ ಅಧಿಕಾರಿ ಕರ್ತವ್ಯಕ್ಕೆ
ಹಾಜರಾಗದೇ ಬೇಜಾವಬ್ದಾರಿತನದಿಂದ ವರ್ತಿಸಿರುವ ಹಿನ್ನಲೆ , ಟಿ.ಹೆಚ್.ಎಂ ಕುಮಾರ್ , ಜವಳಿ ಅಭಿವೃದ್ದಿ ಆಯುಕ್ತರು
ಹಾಗೂ ನಿರ್ದೇಶಕರು ,ಕೈಮಗ್ಗ ಮತ್ತು ಜವಳಿ ಇಲಾಖೆಯ ಶಿಸ್ತು ಪ್ರಾಧಿಕಾರಿ ಅವರು, ಕೆ.ಪಿ. ದಯಾನಂದ್ ಅವರನ್ನು
ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.

 
 
 
 
 
 
 
 
 
 
 

Leave a Reply