ತಾಯಿಯ ಮಾತಿಗೆ ಸಿಟ್ಟಾಗಿ ಆತ್ಮಹತ್ಯೆ ಮಾಡಿಕೊಂಡ ಮಗ

ಮೂಡಬಿದ್ರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಪುತ್ತಿಗೆ ಗ್ರಾಮದ ಕೊಡ್ಯಡ್ಕದಲ್ಲಿ ತಾಯಿ ಬುದ್ಧಿ ಮಾತು ಹೇಳಿದ್ದಕ್ಕೆ ಸಿಟ್ಟಾದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಸುಮಂತ್ ಹೆಗ್ಡೆ(15)  ಆತ್ಮಹತ್ಯೆ ಮಾಡಿಕೊಂಡ ಬಾಲಕ.

ಪುತ್ತಿಗೆ ಕಲ್ಲಬೆಟ್ಟು ಖಾಸಗಿ ಹೈಸ್ಕೂಲ್‌ನ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ ಸುಮಂತ್ ಗುರುವಾರ ಮಧ್ಯಾಹ್ನ  ಪರೀಕ್ಷೆಯ ಉತ್ತರ ಪತ್ರಿಕೆ ಕೊಟ್ಟು ಮನೆಗೆ ಬಂದಿದ್ದ‌. ಉತ್ತರ ಪತ್ರಿಕೆ ಬಗ್ಗೆ ತಾಯಿ ಮಗನನ್ನು ಪ್ರಶ್ನಿಸಿ ಬುದ್ಧಿ ಮಾತು ಹೇಳಿದ್ದರೆನ್ನಲಾಗಿದೆ‌. 

ಇದರಿಂದ ಸಿಟ್ಟಾದ ಆತ ಕೋಣೆಗೆ ಹೋಗಿ ಬಾಗಿಲು ಹಾಕಿ ಫ್ಯಾನ್ ಗೆ ಶಾಲು ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 
 
 
 
 
 
 
 
 
 
 

Leave a Reply