ಮಹತೋಭಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಭಗವತಿ ಮಾರಿಯಮ್ಮ ಸನ್ನಿಧಿ, ಕಟ್ಟದಬುಡ, ಕಲ್ಮಾಡಿ, ಇದರ ಆಷಾಢ ಮಾಸದ ಮಾರಿ ಪೂಜೆಯು ದಿನಾಂಕ 29-7-2020ನೇ ಬುಧವಾರ ನಡೆಯಲಿದೆ.
ಇಂದು ಒಳಗಿನ ಮಾರಿಪೂಜೆಯ ಸಲುವಾಗಿ ಶ್ರೀದೇವಳದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ವೇದಮೂರ್ತಿ ಪುತ್ತೂರು ಹಯವದನ ತಂತ್ರಿ ನೇತೃತ್ವದಲ್ಲಿ ಚಂಡಿಕಾ ಹೋಮ ಸಂಪನ್ನಗೊಂಡಿತು. ನಂತರ ಅನ್ನ ಸಂತರ್ಪಣೆ ಜರಗಿತು.
ಈ ಸಂಧರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ,ಸದಸ್ಯ ಜನಾರ್ದನ್ ಕೊಡವೂರು, ಕೃಷ್ಣಮೂರ್ತಿ ಭಟ್, ಭಗವತಿ ಮಾರಿಯಮ್ಮ ಆಡಳಿತ ಸಮಿತಿ ಅಧ್ಯಕ್ಷ ಕೆ.ಕಾಳು ಶೇರಿಗಾರ್ , ವಿಜಯ ಎಂ. ಬಂಗೇರ , ಪ್ರಕಾಶ್ ಕರ್ಕೇರಾ, ಸದಾಶಿವ ಕರ್ಕೇರಾ , ರಾಘವೇಂದ್ರ ರಾವ್ , ಉಮೇಶ್ ರಾವ್, ರಂಜಿತ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು