ಅಸಹಾಯಕ ಮಕ್ಕಳ ತಂದೆಯ ಶವ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಸಾಮಾಜಿಕ ಕಾರ್ಯಕರ್ತ

ಉಡುಪಿ : ವ್ಯಕ್ತಿಯೋರ್ವ ಜಿಲ್ಲಾಸ್ಪತ್ರೆಯಲ್ಲಿ ಮೃತ ಪಟ್ಟಿದ್ದು, ಶವ ಸಂಸ್ಕಾರ ನಡೆಸಲು ಅಸಹಾಯಕರಾದ ಮಕ್ಕಳಿಗೆ ವಿಶು ಶೆಟ್ಟಿ ಅಂಬಲಪಾಡಿ ಸ್ಪಂದಿಸಿದ್ದಾರೆ. ತಾನೇ ಮುಂದೆ ಬಂದು ಎಲ್ಲಾ ಖರ್ಚನ್ನು ಭರಿಸಿ ಶವ ಸಂಸ್ಕಾರ ನೆರವೆರಿಸಿದ ಘಟನೆ ಇಂದು ಉಡುಪಿ ಬೀಡಿನಗುಡ್ಡೆ ಸ್ಮಶಾನದಲ್ಲಿ ನಡೆದಿದೆ.

ಮೃತ ವ್ಯಕ್ತಿ ಪಿಲ್ಲಾರ್ ಖಾನ್ ನ ನಿವಾಸಿ ಮಂಜುನಾಥ (45 ) ಕೂಲಿ ಕಾರ್ಮಿಕನಾಗಿದ್ದು ಅನಾರೋಗ್ಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತ ಪಟ್ಟಿದ್ದಾನೆ. ಮೃತರ ಸಣ್ಣ ಮಕ್ಕಳು ತಂದೆಯ ಶವ ಸಂಸ್ಕಾರದ ಬಗ್ಗೆ ದುಃಖಿಸುತ್ತಿದ್ದು , ವಿಷಯ ತಿಳಿದ ವಿಶು ಶೆಟ್ಟಿ ಮಕ್ಕಳ ಮುಖಾಂತರ ಶವವನ್ನು ಆಸ್ಪತ್ರೆಯಿಂದ ಪಡೆದು ತಾನೇ ಮುಂದೆ ನಿಂತು ಎಲ್ಲಾ ಖರ್ಚನ್ನು ಭರಿಸಿ ಮಕ್ಕಳ ಮೂಲಕ ವಿಧಿ ವಿಧಾನ ನೆರವೆರಿಸಿ ಬೀಡಿನಗುಡ್ಡೆ ರುದ್ರ ಭೂಮಿಯಲ್ಲಿ ಅಂತ್ಯ ಕ್ರಿಯೆ ನೆರವೆರಿಸಿ ಮಾನವೀಯತೆ ಮೆರೆದಿದ್ದಾರೆ. 

ಇದರೊಂದಿಗೆ ಮಕ್ಕಳಿಗೆ ಧೈರ್ಯತುಂಬಿ ಏನಾದರೂ ಸಹಾಯ ಬೇಕಾದಲ್ಲಿ ಸ್ವಂದಿಸುವುದಾಗಿ ಭರವಸೆ ನೀಡಿದ್ದಾರೆ.ಉದ್ಯಾವರ ರಾಮದಾಸ್ ಪಾಲನ್ ಸಹಕರಿಸಿದ್ದಾರೆ.ಮೃತರ ಮಕ್ಕಳ ಭವಿಷ್ಯತ್ತಿನ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕೆಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

 
 
 
 
 
 
 
 
 
 
 

Leave a Reply