ಪುತ್ತೂರಿನ‌ ಯೋಗಗುರು ರಾಜೇಂದ್ರ ಎಂಕಮೂಲೆ ನೇತೃತ್ವದಲ್ಲಿ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ವಾಸುದೇವ ಕ್ರಿಯಾ ಯೋಗ

ಆಸ್ಟ್ರೇಲಿಯಾ: ವಿಶ್ವಯೋಗ ದಿನಾಚರಣೆಯ ಅಂಗವಾಗಿ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಭಾರತೀಯ ಯೋಗ ವೈಭವ ನಡೆದಿದೆ.

ದ.ಕ‌ ಜಿಲ್ಲೆಯ ಯೋಗ ಗುರು ವಾಸುದೇವ ಕ್ರಿಯಾ ಯೋಗದ ಸ್ಥಾಪಕ ರಾಜೇಂದ್ರ ಎಂಕಮೂಲೆಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಮಂತ್ರಿ ಜೇಸನ್ ವುಡ್ ಎಂಪಿ,ಮೈಕಲ್ ಸಕ್ಕರ್ ಹಾಗೂ ಸಂಸದರು ಮತ್ತು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಭಾಗವಹಿಸಿ ಯೋಗಾಸನಗೈದರು.

ರಾಜೇಂದ್ರ ಎಂಕಮೂಲೆ ಮಾತನಾಡಿ ಜಗತ್ತಿನ ಸ್ವಾಸ್ಥ್ಯ ಮತ್ತು ಶಾಂತಿಗೆ ಯೋಗ ಪ್ರಮುಖ ಸಾಧನವಾಗಿದೆ.‌ಓರ್ವ ಆರೋಗ್ಯವಂತ ವ್ಯಕ್ತಿ ಮಾತ್ರ ಒಂದು ಸಮಾಜದ ಶಕ್ತಿಯಾಗಬಲ್ಲ. ಆದ್ದರಿಂದ ಪ್ರತಿಯೊಬ್ಬರೂ ಯೋಗದ ಮೂಲಕ ನಿರೋಗಿಗಳಾಗಿ ಸಮಾಜದ ಶಕ್ತಿಗಳಾಗಬೇಕು.ವೈಯಕ್ತಿಕ ಸ್ವಾಸ್ಥ್ಯ ವಿಶ್ವ ಆರೋಗ್ಯ ಸಂಸ್ಥೆಯ ಅಥವಾ ಆರೋಗ್ಯ ಮಂತ್ರಿಯ ಕೆಲಸ ಅಲ್ಲ ಎಲ್ಲರೂ ಅವರವರ ಉತ್ತಮ ಆರೋಗ್ಯಕ್ಕಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ಸಮಾಜ ಸೇವಕ ರಾಮ್ ಪಾಲ್ ಮುತ್ಯಾಳ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.‌ಆಸ್ಟ್ರೇಲಿಯಾ ದ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗವನ್ನು ಅಳವಡಿಸುವಂತೆ ಮನವಿ ಅರ್ಪಿಸಲಾಯಿತು.

 
 
 
 
 
 
 
 
 
 
 

Leave a Reply