ಯುಪಿಎಂಸಿ ಪ್ರೀಮಿಯರ್ ಲೀಗ್- ಅಂತರ್ಕಕ್ಷ್ಯಾ ಪಂದ್ಯಾಟ ಉದ್ಘಾಟನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಏಪ್ರಿಲ್ 20ರಂದು ಯುಪಿಎಂಸಿ ಪ್ರಿಮಿಯರ್ ಲೀಗ್ – 24 ಅಂತರ್ಕಕ್ಷ್ಯಾ ವಾಲಿಬಾಲ್, ಥ್ರೋ ಬಾಲ್ ಪಂದ್ಯಾಟವು ಜರಗಿತು. 

ಉಡುಪಿಯ ಉಜ್ವಲ್ ಗ್ರೂಪ್ಸ್ ನ ಆಡಳಿತ ನಿರ್ದೇಶಕರಾದ ಶ್ರೀ ಅಜಯ್ ಪಿ. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಂಪ್ರದಾಯಿಕ ವಾಣಿಜ್ಯ ಮತ್ತು ಆಡಳಿತ ನಿರ್ವಹಣೆಯ ತರಗತಿಯ ಪಾಠಗಳಿಗೆ ಪ್ರಾಯೋಗಿಕತೆಯನ್ನು ಕಲ್ಪಿಸುವ ದೃಷ್ಟಿಯಿಂದ ಮಕ್ಕಳಿಗೇ ಜವಾಬ್ದಾರಿ ಇತ್ತು ನಡೆಸಿದ ಪಂದ್ಯಾಟವು ಇದಾಗಿದೆ. ಐಪಿಲ್ ಮಾದರಿಯಲ್ಲಿ ಆಟಗಾರರ ಏಲಂ ನಡೆಸಿ ಐದು ತಂಡಗಳನ್ನು ರಚಿಸಿ ವಿದ್ಯಾರ್ಥಿಗಳು ನಡೆಸಿದ ಈ ಪಂದ್ಯಾಟವು ನಾಯಕತ್ವವೇ ಮೊದಲಾದ ಗುಣಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು. 

ಮುಖ್ಯ ಅತಿಥಿಗಳಾದ ದೈವಾನುಗ್ರಹ ಚಿಟ್ ಫಂಡ್ ನ ಮಾಲಕ ಶ್ರೀ ರಾಘವೇಂದ್ರ ಶೇರಿಗಾರ್ ಪುರುಷರ ವಾಲಿಬಾಲ್ ಪಂದ್ಯಾಟಕ್ಕೆ ಹಾಗೂ ಶ್ರೀಮತಿ ಶಕುಂತಳಾ ಆರ್. ಶೇರಿಗಾರ್ ಮಹಿಳೆಯರ ಥ್ರೋ ಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು. 

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್, ವಿದ್ಯಾರ್ಥಿ ತಂಡಗಳ ಮಾಲಕರಾದ ರಚನ್ ಸಾಲ್ಯಾನ್, ಶಶಾಂಕ್, ಸುಹಾಫ್, ಪ್ರೀತಂ, ತುಷಾರ್, ಸುಜನ್, ಕಾವ್ಯ ಶೆಟ್ಟಿ ಉಪಸ್ಥಿತರಿದ್ದರು.

ವರ್ಷಾ ಕಾಮತ್ ಸ್ವಾಗತಿಸಿದರು, ಯಶಸ್ವಿನಿ ಧನ್ಯವಾದವಿತ್ತರು, ಪ್ರೇಮಸಾಯಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply