ಯು.ಪಿ‌.ಎಂ.ಸಿ- ವಾರ್ಷಿಕ ಕ್ರೀಡಾಕೂಟ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 2023-24 ನೇ ಸಾಲಿನ 33ನೇ ವಾರ್ಷಿಕ ಕ್ರೀಡಾಕೂಟವು ಏಪ್ರಿಲ್ 12 ರಂದು ಎಂ.ಐ.ಟಿ ಅಥ್ಲೆಟಿಕ್ ಸ್ಟೇಡಿಯಂ ಮಣಿಪಾಲ್ ನಲ್ಲಿ ಜರಗಿತು.

ಉಡುಪಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕರಾದ ಶ್ರೀ ದಿನೇಶ್ ಕುಮಾರ್ ಎ. ಉದ್ಘಾಟಿಸಿ, ವಿದ್ಯಾರ್ಥಿಗಳು ಈ ದಿನಗಳಲ್ಲಿ ಕೇವಲ ಮೊಬೈಲ್ ನ ಕ್ರೀಡೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು ಮೈದಾನದಲ್ಲಿ ಕ್ರೀಡಾ ಸಾಮರ್ಥ್ಯ ತೋರಿಸುವಲ್ಲಿ ಹಿಂಜರಿಯುತ್ತಿದ್ದಾರೆ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಉಲ್ಲೇಖಿಸಿ, ಕ್ರೀಡಾಕೂಟವು ದೈಹಿಕ, ಮಾನಸಿಕ ಆರೋಗ್ಯ ನೀಡುವುದರ ಜೊತೆಗೆ ಸಹಬಾಳ್ವೆ, ಸಂಘಟನೆ ಮತ್ತು ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು. 

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ ಪ್ರಾಚಾರ್ಯ ಶ್ರೀ ರಾಧಾಕೃಷ್ಣ ರಾವ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು. 

ಕಾವ್ಯ ಶೆಟ್ಟಿ ತೃತೀಯ ಬಿಬಿಎ ಕ್ರೀಡಾವಿಧಿ ಬೋಧಿಸಿದರು. ತೃತೀಯ ಬಿ.ಕಾಂ ನ ಪ್ರೇಮಸಾಯಿ ಸ್ವಾಗತಿಸಿದರು, ನೌಶಿನ್ ವಂದಿಸಿದರು, ಪ್ರಣೀತ ಶೆಟ್ಟಿ ತೃತೀಯ ಬಿಬಿಎ ನಿರೂಪಿಸಿದರು.

 
 
 
 
 
 
 
 
 
 
 

Leave a Reply