ಉಡುಪಿ ಪತಂಜಲಿ ಜಿಲ್ಲಾ ಸಮಿತಿಯವರಿಂದ ಸ್ವಚ್ಛ ಭಾರತ ಅಭಿಯಾನ್

ಉಡುಪಿ : ಇಂದು ಗಾಂಧಿ ಜಯಂತಿಯ ಪ್ರಯುಕ್ತ ಪತಂಜಲಿ ಯೋಗ ಪೀಠ ಹರಿದ್ವಾರ್, ಉಡುಪಿ ಪತಂಜಲಿ ಜಿಲ್ಲಾ ಸಮಿತಿಯವರಿಂದ ಸ್ವಚ್ಛ ಭಾರತ ಅಭಿಯಾನ್ ಕಾರ್ಯಕ್ರಮದ ಅಂಗವಾಗಿ ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲನ ಮಾಡಿ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಮನಸಿನಲ್ಲಿ ಸ್ವಚ್ಛ ಮನ ಜ್ಯೋತಿ ಬೆಳಗಿಸಿ, ನಂತರ ಪರಿಸರದ ಸ್ವಚ್ಛತಾ ಕಾರ್ಯದಲ್ಲೂ ತಮ್ಮನ್ನು ತೊಡಗಿಸಕೊಳ್ಳಬೇಕೆಂದು ನೆರೆದ ಯೋಗಾರ್ತಿಗಳೆಲ್ಲವರನ್ನು ಉದ್ದೇಶಿಸಿ ಮಾತಾಡಿ ಆಶೀರ್ವಾದ ನೀಡಿದರು.

ಉಡುಪಿ ಪರಿಸರದ ಪತಂಜಲಿ ಪರಿವಾರದ ಹೆಚ್ಚಿನ ಯೋಗಾರ್ತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಚ್ಛ ಭಾರತ್ ಭಾರತ್ ಅಭಿಯಾನ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 
 
 
 
 
 
 
 
 
 
 

Leave a Reply