ಉಡುಪಿ : ಕಳ್ಳತನ ಆರೋಪಿಯ ಬಂಧನ

ದಿನಾಂಕ: 05/12/2023 ರಂದು ಪಿರ್ಯಾದಿದಾರರಾದ ಸಂತೋಷ್‌, ಪುತ್ತೂರು ಗ್ರಾಮ, ಉಡುಪಿ ಇವರು ಮಾತಾ ಸೆಲ್ಯೂಷನ್‌ ಹೋಮ್‌ ನರ್ಸ್‌ ರವರಿಂದ ಪ್ರವೀಣ್‌ ಕುಮಾರ್‌ ಜಾಲಪ್ಪ ಹರದೊಳ್ಳ ಎಂಬಾತನನ್ನು ಹೋಂ ನರ್ಸ್‌ ಕೆಲಸಕ್ಕೆ ಇಟ್ಟುಕೊಂಡಿದ್ದು, ಪ್ರವೀಣನು ದಿನಾಂಕ 04/12/2023 ಸಂಜೆ 06:30 ಗಂಟೆಯಿಂದ ರಾತ್ರಿ 09:00 ಗಂಟೆಯವರೆಗೆ ಆತನು ಮನೆಯಲ್ಲಿ ಕಾಣದೆಯಿದ್ದು, ಮನೆಗೆ ವಾಪಸ್ಸು ಬಾರದೇ ಇದ್ದುದ್ದರಿಂದ ಪ್ರವೀಣನ ಬಗ್ಗೆ ವಿಚಾರಿಸಿದಾಗ ಆತನು ಅಲ್ಲಿಗೂ ಹೋಗದೇ ಇದ್ದು ಮನೆಯಲ್ಲಿ ಹಾಗೂ ಬೊಲೆರೋ ವಾಹನದ ಡ್ಯಾಶ್‌ ಬೋರ್ಡನಲ್ಲಿಟ್ಟಿದ್ದ 3,45,000/- ರೂಪಾಯಿ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ 185/2023 ಕಲಂ.381 ಐಪಿಸಿಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕ ಮಂಜಪ್ಪ ಡಿ.ಆರ್‌. ನೇತೃತ್ವದ, ಪಿಎಸ್‌ಐ ಪುನೀತ್‌ ಕುಮಾರ್‌ ಬಿ.ಇ, ಈರಣ್ಣ ಶಿರಗುಂಪಿ, ಭರತೇಶ್‌ ಕಂಕಣವಾಡಿ ಹಾಗೂ ಎಎಸ್‌ಐ ವಿಜಯ್‌, ಸಿಬ್ಬಂದಿಯವರಾದ ಸತೀಶ್‌, ನೇತ್ರಾವತಿ, ಕಿರಣ್‌, ಆನಂದ, ಒಬಳೇಶ್‌ ಹಾಗೂ ಶಿವಕುಮಾರ್‌ ರವರನ್ನು ಒಳಗೊಂಡ ವಿಶೇಷ ತಂಡವು ದಿನಾಂಕ 07/12/2023 ರಂದು ಪ್ರವೀಣ್‌ ಕುಮಾರ್‌ ಜಾಲಪ್ಪ ಹರದೊಳ್ಳೀ (34), ಹುನಗುಂದ ತಾಲೂಕು ಎಂಬಾತನನ್ನು ಬಾಗಲಕೋಟೆಯಲ್ಲಿ ವಶಕ್ಕೆ ಪಡೆದು ಕಳವು ಮಾಡಿದ್ದ 3,13,500/- ರೂಪಾಯಿ ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.

 
 
 
 
 
 
 
 
 
 
 

Leave a Reply