ಮಹಿಷ ದಸರಾ ಮಾಡಲು ಬಿಡುವುದಿಲ್ಲ ~ಸುನೀಲ್ ಕೆ. ಆರ್

ದೀಪಾವಳಿ, ನವರಾತ್ರಿ ಹಬ್ಬಗಳು ಹಿಂದೂಗಳ ಸಂಸ್ಕೃತಿ ಮತ್ತು ಸಂಸ್ಕಾರ. ಅಸುರ ಮನೋಭಾವನೆಯನ್ನು ನಿಗ್ರಹಿಸುವ ದೃಷ್ಟಿಕೋನದಿಂದ ನವರಾತ್ರಿ ಆಚರಿಸುತ್ತೇವೆ. ಆದರೆ, ಉಡುಪಿಯಲ್ಲಿ ಮಹಿಷ ದಸರಾ ಆಚರಿಸಲು ಬಿಡುವುದಿಲ್ಲ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಬಜರಂಗದಳ ಸಂಯೋಜಕ ಸುನೀಲ್ ಕೆ. ಆರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲವು ನಗರ ನಕ್ಸಲರು ಸೇರಿಕೊಂಡು ಮಹಿಷ ದಸರಾ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆಸುರೀ ಭಾವನೆ ಬೆಳೆಸಬೇಕು, ಮಹಿಷಾಸುರನನ್ನು ವೈಭವೀಕರಿಸಬೇಕು ಎಂಬ ಮನಸ್ಥಿತಿಯವರಿಂದ ಹಿಂದೂ ಸಮಾಜಕ್ಕೆ ನೋವಾಗಿದೆ ಎಂದರು.
ಜಿಲ್ಲಾಡಳಿತ, ಸರಕಾರ, ಪೊಲೀಸ್ ಇಲಾಖೆ ಮಹಿಷ ದಸರಾಕ್ಕೆ ಅನುಮತಿ ನೀಡಬಾರದು. ಅದನ್ನು ಮೀರಿ ಮಹಿಷ ದಸರಾ ನಡೆಯುತ್ತದೆ ಎಂದಾದರೆ ಅದನ್ನು ತಡೆಯಲು ಬಜರಂಗ ದಳ ಮುಂದೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಸ್ತ ಹಿಂದೂ ಬಾಂಧವರು ಮಹಿಷ ದಸರಾವನ್ನು ವಿರೋಧಿಸಬೇಕೆಂದು ಸುನಿಲ್ ಕೆ.ಆರ್. ಕರೆ ನೀಡಿದರು.
 
 
 
 
 
 
 
 
 
 
 

Leave a Reply