ತೆಂಕನಿಡಿಯೂರು: “ಆಜಾದಿ ಕಾ ಅಮೃತಮಹೋತ್ಸವ” ಪ್ರಯುಕ್ತ ಜಾಥಾ

ಸರಕಾರಿ ಪದವಿಪೂರ್ವ ಕಾಲೇಜು ತೆಂಕನಿಡಿಯೂರು ಇಲ್ಲಿನ ಕಾಲೇಜು ಹಾಗೂ ಪ್ರೌಢಶಾಲಾ ವತಿಯಿಂದ ಜಂಟಿಯಾಗಿ “ಆಜಾದಿ ಕಾ ಅಮೃತಮಹೋತ್ಸವ” ಪ್ರಯುಕ್ತ ದಿನಾಂಕ 13.08.2022ರಂದು ಜಾಥಾ ನೆಡೆಸಲಾಯಿತು. ಶಾಲಾ ಮೈದಾನದಿಂದ ರಾಷ್ಟ್ರಧ್ವಜ ಹಾಗೂ ಬ್ಯಾಂಡ್ ಗಳೊಂದಿಗೆ ಹೊರಟ ಮೆರವಣಿಗೆ ಘೋಷಣೆಗಳೊಂದಿಗೆ ಸಂಪೂರ್ಣ ಪೇಟೆಯನ್ನು ಸುತ್ತುವರಿದು ಜನವಸತಿ ಪ್ರದೇಶಗಳ ಮೂಲಕ ಸಾಗಿ ಗ್ರಾಮ ಪಂಚಾಯತ್ ಅಂಗಣ ಪ್ರವೇಶಿಸಿ ಅಲ್ಲಿಂದ ಶಾಲಾ ಆವರಣದೊಳಗೆ ಪ್ರವೇಶಿಸಲಾಯಿತು. ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಸುಮಾರು ಒಂದು ಗಂಟೆಗಳ ಕಾಲ ನೆಡೆದ ಮೆರವಣಿಗೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಪ್ರೌಢಶಾಲಾ ಹಿರಿಯ ಸಹಶಿಕ್ಷಕರು, ಸಹಶಿಕ್ಷಕರು ಮತ್ತು ಸಿಬ್ಬಂದಿಯವರು ಮಕ್ಕಳ ಜೊತೆಯಲ್ಲಿ ಹೆಜ್ಜೆ ಹಾಕಿದರು.

 
 
 
 
 
 
 
 
 
 
 

Leave a Reply