ಕೋಟಿ ಗೀತಾ ಲೇಖನ ಯಜ್ಞದಿಂದ ಆತ್ಮೋದ್ಧಾರ: ಸಿ. ಟಿ.ರವಿ

ಚಿಕ್ಕಮಗಳೂರು: ಭಗವದ್ಗೀತೆ ದಾರ್ಶನಿಕರನ್ನು ನೀಡಿದೆ. ರಾಷ್ಟ್ರ ಭಕ್ತರನ್ನು ಕೊಟ್ಟಿದೆ ಹೊರತಾಗಿ ಭಯೋತ್ಪಾದನೆಯನ್ನು ಸೃಷ್ಟಿಸಿಲ್ಲ. ಹೀಗಾಗಿ ಶ್ರೀ ಪುತ್ತಿಗೆ ಶ್ರೀಪಾದರ ಜಾಗತಿಕ ಧಾರ್ಮಿಕ ಅಭಿಯಾನವೆ ನಿಸಿರುವ ಕೋಟಿ ಗೀತಾ ಲೇಖನ ಯಜ್ಞದಿಂದ ಆತ್ಮೋದ್ಧಾರ ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ (ತಮ್ಮ ನಿವಾಸದಲ್ಲಿ )ತಮ್ಮನ್ನು ಭೇಟಿಯಾದ ಶ್ರೀಗಳಿಂದ ನಿಯೋಜಿಸಲ್ಪಟ್ಟ ನಾರಾಯಣ ಪ್ರಖಂಡ ಗೀತಾ ಪ್ರಚಾರ ತಂಡದವರನ್ನು ಆದರದಿಂದ ಬರಮಾಡಿಕೊಂಡ ಅವರು ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದರು. ಗೀತಾ ಪ್ರಚಾರಕ ಸುಗುಣ ಮಾಲಾ ಸಂಪಾದಕರಾದ ಮಹಿತೋಷ ಆಚಾರ್ಯರು ಸಚಿವರಿಗೆ ದೀಕ್ಷಾ ಸಂಕಲ್ಪಸೂತ್ರ ತೊಡಿಸಿ ಗೀತಾ ಲೇಖನ ಹೊತ್ತಿಗೆಯನ್ನು ಹಸ್ತಾಂತರಿಸಿದರು. ತಂಡದ ಸದಸ್ಯರಾದ ಪ್ರಭoಜನ ಮತ್ತು ಸಂದೀಪ್ ಜೋಶಿ ಹಾಗೂ ಪ್ರಾಂತೀಯ ಸಂಘಟಕರಾದ ಶ್ರೀಮತಿ ಸಂಧ್ಯಾ ಸುಧೀಂದ್ರ ಅವರು ಜೊತೆಗಿದ್ದರು.

 
 
 
 
 
 
 
 
 
 
 

Leave a Reply