ವಿದ್ಯುತ್ ಸ್ಪರ್ಶಿಸಿ ಯುವಕ ಮೃತ್ಯು!

ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲೂಕಿನ ಹಿರೇಮಳಲ್ಲಿ ಸಮೀಪದ ಭದ್ರಾನಾಲೆಯಲ್ಲಿ ನಡೆದಿದೆ.
 
ತಾಲೂಕಿನ ಮಾವಿನಕಟ್ಟೆ ಗ್ರಾಮ ನಿವಾಸಿ ಅಭಿಷೇಕ್(28)ಮೃತ ಯುವಕ ಎಂದು ತಿಳಿದು ಬಂದಿದೆ.
ಹಿರೇಮಳಲ್ಲಿ ಗ್ರಾಮದಲ್ಲಿ ಭದ್ರಾನಾಲೆಯ ಸುರಂಗ ಹಾದುಹೋಗಿದ್ದು, ನಾಲೆಯಲ್ಲಿ ನೀರು ಇರಲಿಲ್ಲ. ಹೀಗಾಗಿ ಯುವಕ ಸುರಂಗ ನೋಡಲು ಹೋಗಿದ್ದನು ಎನ್ನಲಾಗಿದೆ.
 
ನಾಲೆಯಿಂದ ನೀರನ್ನು ಮೇಲೆತ್ತಲು ಇಟ್ಟಿದ ಮೋಟಾರ್ ನಿಂದ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
 
 
 
 
 
 
 
 
 
 

Leave a Reply