ನಮ್ಮ ಭೂಮಿಗೆ ಅವಿಸ್ಮರಣೀಯ ಭೇಟಿ

ಉಡುಪಿಯ ಡಾಟಿಎಂಎ ಪೈ ಶಿಕ್ಷಣ ಕಾಲೇಜಿನ ಮೂರನೆಯ ಸೆಮಿಸ್ಟರ್ ನ ವಿದ್ಯಾರ್ಥಿ- ಶಿಕ್ಷಕರು ಕುಂದಾಪುರ ಸಮೀಪದ ‘ ದುಡಿಯುವ ಮಕ್ಕಳ ಬಗೆಗೆ ಕಾಳಜಿ ಸಂಸ್ಥೆ ನಮ್ಮ ಭೂಮಿಗೆ ಭೇಟಿ ನೀಡಿದರು.ಈ ಭೇಟಿಯ ಸಂದರ್ಭದಲ್ಲಿ ಸಸ್ಯರಾಜಿಯಿಂದ ಸಹಜವಾಗಿ ಕಂಗೊಳಿಸುವ ನಮ್ಮ ಹಳ್ಳಿ,ನಮ್ಮ ಭೂಮಿ,ನಮ್ಮ ಅಂಗಡಿ,ನಳಂದಾ ವಿದ್ಯಾಲಯ ಮುಂತಾದ ವಿವಿಧ ಘಟಕಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿದರು.ದನ ಸಾಕಾಣಿಕೆ,ಜೈವಿಕ ಅನಿಲ ಸ್ಥಾವರ,ಎರೆಹುಳ ಗೊಬ್ಬರ ಸ್ಥಾವರ , ಇಂಗುಗುಂಡಿ,ವಿದ್ಯಾರ್ಥಿಗಳ ವಸತಿಗೃಹಗಳು ಇತ್ಯಾದಿಗಳಿಗೆ ಭೇಟಿ ನೀಡಿ ಸಂಸ್ಥೆಯ ನಿರ್ದೇಶಕ ಶ್ರೀ ಶಿವಾನಂದ ಶೆಟ್ಟಿ ಅವರೊಡನೆ ಸಂವಾದ ನಡೆಸಿದರು.ನಮ್ಮಭೂಮಿಯಲ್ಲಿ ಅರಳಿದ ಕಲಾಕುಸುಮ ಶ್ರೀ ರಾಮಾಂಜಿ ಈ ಭೇಟಿಯ ಸಮಯದಲ್ಲಿ ಮಾರ್ಗದರ್ಶಕರಾಗಿ ಸಹಕರಿಸಿದರು.ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಸ್ವಾಗತ ಕೋರಿ ಈ ಭೇಟಿಯ ಉದ್ದೇಶಗಳನ್ನು ಸ್ಪಷ್ಡಪಡಿಸಿದರು.ಶ್ರೀ ಶಿವಾನಂದ ಶೆಟ್ಟಿಯವರು ಸಂಸ್ಥೆ ಹುಟ್ಡಿಕೊಂಡ ಹಿನ್ನೆಲೆ ಮತ್ತು ಉದ್ದೇಶಗಳನ್ನು ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ವಿವರಿಸಿದರು. ವಿದ್ಯಾರ್ಥಿಶಿಕ್ಷಕರ ಹಲವಾರು ಸಂದೇಹಗಳನ್ನು ಪರಿಹರಿಸಿದರು.ವಿಜಯಶ್ರೀ ವಂದಿಸಿದರು.

 
 
 
 
 
 
 
 
 
 
 

Leave a Reply