ಸಮಾಜ ಸೇವಕ ಸುಧಾಕರ್ ಶೆಟ್ಟಿ ಮಟ್ಟಿ ಬೈಲು ನಿಧನ

ಹಿರಿಯಡ್ಕ: ಪುತ್ತಿಗೆಯ ನಿವಾಸಿ, ಸಮಾಜಸೇವಕ ಸುಧಾಕರ್ ಶೆಟ್ಟಿ ಮಟ್ಟಿ ಬೈಲು(56) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಸಾಮಾಜಿಕ ಚಟುವಟಿಕೆ, ಹಾಗೂ ಈ ಹಿಂದೆ ಪುತ್ತಿಗೆ ಸೇತುವೆ ಉಳಿಸುವಲ್ಲಿ ಹೋರಾಟ ನಡೆಸಿದ್ದರು.ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರತಿವರ್ಷ ಸಾವಿರಾರು ಕದಿರನ್ನು ತಾವೇ ಗದ್ದೆಯಲ್ಲಿ ಫಸಲು ಬೆಳೆಸಿ ನೀಡಿ ಸೇವೆಗೈಯ್ಯುತ್ತಿದ್ದರು.

ಮೃತರಿಗೆ ಪತ್ನಿ, ಹಾಗೂ ಪುತ್ರನನ್ನು ಅಗಲಿದ್ದಾರೆ. ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡು ಹಾಗೂ ಕಾಪು ಕ್ಷೇತ್ರದ ಮಾಜಿ ಶಾಸಕ ದಿ. ಭಾಸ್ಕರ್ ಶೆಟ್ಟಿ ಜೊತೆ ಕೂಡ ರಾಜಕೀಯ ನಂಟು ಹೊಂದಿದ್ದು ಗುರುತಿಸಿಕೊಂಡಿದ್ದರು. ಇದೀಗ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದು,ಪರ್ಕಳ ಶಾಮರಾಯ ಸರ್ಕಲ್ ಬಳಿ ಕಟ್ಟಿಗೆ ಡಿಪೋ,ಮತ್ತು ಫರ್ನಿಚರ್ ಅಂಗಡಿ ಹೊಂದಿದ್ದರು.

 
 
 
 
 
 
 
 
 
 
 

Leave a Reply