ಉಡುಪಿ: ಗಮನ ಸೆಳೆದ ಸಮಾಜ ಸೇವಕ ರವಿ ಕಟಪಾಡಿ ವಿಚಿತ್ರ ವೇಷ

ತನ್ನ ವಿಶೇಷ ಅಬ್ಬರದ ವೇಷಭೂಷಣಗಳೊಂದಿಗೆ ಜನಪ್ರಿಯವಾಗಿರುವ, ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ದುಡ್ಡು ಸಂಗ್ರಹಿಸಿ ಬಡಮಕ್ಕಳ ವೈದ್ಯಕೀಯ ನೆರವು ನೀಡುತ್ತಿರುವ ಉಡುಪಿಯ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿಯೂ ವಿಶೇಷ ವೇಷದೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೃಷ್ಣಾಷ್ಟಮಿಯಲ್ಲಿ “ಡೀ ಮನ್ ” ರಾಕ್ಷಸ ವೇಷ ಹಾಕಿದ್ದು ದುಡ್ಡು ಸಂಗ್ರಹಿಸಿ ಅನಾರೋಗ್ಯ ಪೀಡಿತರಿಗೆ, ಅಸಹಾಯಕರಿಗೆ ನೆರವಾಗಲಿದ್ದಾರೆ. ಇಂದು ಬೆಳಗ್ಗೆ ಇಲ್ಲಿನ ಕಟಪಾಡಿ ಕೋಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರವಿ ಕಟಪಾಡಿ ವೇಷಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರವಿ, ಕಳೆದ ಏಳು ವರ್ಷಗಳಿಂದ ಕೃಷ್ಣಾಷ್ಟಮಿಯಂದು ವೇಷ ಹಾಕಿ ನನ್ನ ತಂಡದೊಂದಿಗೆ ಪ್ರದರ್ಶನ ನೀಡುತ್ತಿದ್ದೇನೆ. ಈ ಬಾರಿ ಏಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಇದುವರೆಗೆ ನಾವು 90 ತೊಂಬತ್ತು ಲಕ್ಷ ರೂಪಾಯಿಯಷ್ಟು ಹಣವನ್ನು ಸಂಗ್ರಹಣೆ ಮಾಡಿದ್ದು, ಸಾಧಾರಣ 66 ಮಕ್ಕಳಿಗೆ ಚಿಕಿತ್ಸೆಗಾಗಿ ನೀಡಿದ್ದೇವೆ. ಅನೇಕ ಅನಾರೋಗ್ಯ ಪೀಡಿತ ಮಕ್ಕಳ ಪಟ್ಟಿಗಳು ನಮಗೆ ಬಂದಿದ್ದು ಅವರೆಲ್ಲರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ. ಹೀಗಾಗಿ ಎಲ್ಲರೂ ಕೂಡ ಹೆಚ್ಚಿನ ರೀತಿಯ ಸಹಕಾರವನ್ನು ನೀಡಿ ಎಂದು ಮನವಿ ಮಾಡಿದ್ದಾರೆ. ಯಾಕಂದ್ರೆ ಜನ ನಮ್ಮ ಮೇಲೆ ನಂಬಿಕೆ ಅವರು ದುಡಿದ ಹಣವನ್ನು ನಮಗೆ ಕೊಡ್ತಾರೆ.ಯಾರೂ ಕೂಡ ಜನರು ನಂಬಿಕೆ ಇಟ್ಟು ಕೊಟ್ಟ ಹಣಕ್ಕೆ ಮೋಸ ಮಾಡಬೇಡಿ ಎಂದು ಮನವಿ ಮಾಡಿದರು. ರವಿ ಕಟಪಾಡಿ ತಂಡದ ಮಾರ್ಗದರ್ಶಕ ಮಹೇಶ್ ಶೆಣೈ ಮಾತನಾಡಿ, ರವಿ ಕಟಪಾಡಿಯವರೊಂದಿಗೆ 2013 ಇದ್ದೆನೆ. ಈ ತನಕ 90 ಲಕ್ಷವನ್ನು ಬಡ ಮಕ್ಕಳ ಚಿಕೆತ್ಸೆಗಾಗಿ ನೀಡಿದ್ದಾರೆ. ಈ ಬಾರಿಯೂ 10 ಲಕ್ಷರೂ ಜಮೆ ಮಾಡಿ, 1 ಕೋಟಿ ರುಪಾಯಿಗೆ ಮುಟ್ಟುವ ಭರವಸೆ ಇದೆ ಎಂದರು. ಇನ್ನು ರವಿ ಕಟಪಾಡಿಯವರ ವೇಷದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸ್ಮಾಟ್ ಆರ್ಟ್ ಸಂಸ್ಥೆಯ ಮುಖ್ಯಸ್ಥ ಆಕ್ಷಯ್ ಮಾತನಾಡಿ ಇದಕ್ಕಾಗಿ ಕಳೆದ ಮೂರು ತಿಂಗಳಿನಿಂದ ಪ್ರಯತ್ನ ಪಟ್ಟಿದ್ದೇವೆ.ಮಯಿಗೆ ಹಾನಿಕಾರಕವಲ್ಲದ ಬಣ್ಣವನ್ನು ಉಪಯೋಗಿಸುತ್ತಿದ್ದೇವೆ ಎಂದರು.

ಚಿತ್ರ – ವಾಮನ್ ಪಡುಕೆರೆ

 
 
 
 
 
 
 
 
 
 
 

Leave a Reply