ವಿವಿದೆಡೆ ಸ್ವಚ್ಚ ಭಾರತ್ ಅಭಿಯಾನ

ದಿನಾಂಕ 9.10.2022. ಭಾನುವಾರ ಮುಂಜಾನೆ ಉಡುಪಿಯ ರಾಜಾಂಗಣ ಪಾರ್ಕಿಂಗ್ ಪರಿಸರ,ಶಿರ್ವದ ಮಹಿಳಾ ಸೌಧ ಪರಿಸರ,ಹಿರಿಯಡ್ಕ ವೀರಭದ್ರ ದೇವಸ್ಥಾನ ಪರಿಸರ,ಕಾರ್ಕಳ ಸಿದ್ದಿ ವಿನಾಯಕ ದೇವಸ್ಥಾನದ ಪರಿಸರದಲ್ಲಿ ಪತಂಜಲಿ ಯೋಗ ಪರಿವಾರದವರು ಪರಿಸರ ಸ್ವಚ್ಛತಾ ಆಂದೊಲನ ಅಂಗವಾಗಿ ಪರಿಸರವನ್ನು ಸ್ವಚ್ಛತೆಗೊಳಿಸಿ ನೆರೆದ ಯಾತ್ರಾರ್ಥಿ ಸಮೂಹಕ್ಕೆ ಪ್ರಚಲಿತ ಮನುಷ್ಯ/ಪ್ರಾಣಿ ಸಂಕುಲಕ್ಕೆ ಸಮಸ್ಯೆಯಾಗಿರುವ ಪರಿಸರ ಮಾಲಿನ್ಯ ತಡೆಗಟ್ಟಲು ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ವಿನೂತನ ರೀತಿಯಲ್ಲಿ ಚಾಲನೆ ನೀಡುವಲ್ಲಿ ಪ್ರಚಲಿತ ಲಭ್ಯವಿರುವ ತಂತ್ರಜ್ಞಾನದ ಬಳಕೆಯಾಗಿ ವಿಡಿಯೋ ಕರೆಯ ಮೂಲಕ ರಾಜ್ಯ ಮಹಿಳಾ ಪ್ರಭಾರಿ ಶ್ರೀಮತಿ ಸುಜಾತಾ ಮಾರ್ಲ ಜೀ, ರಾಜ್ಯ ಸಹ ಪ್ರಭಾರಿ ಶ್ರೀ ಜ್ಞಾನೇಶ್ವರ್ ನಾಯಕ್ ಜೀ,ಮಂಡಲ ಪ್ರಭಾರಿ ಶ್ರೀ ರಾಘವೇಂದ್ರ ರಾವ್ ಜೀ,ಜಿಲ್ಲಾ ಪ್ರಭಾರಿ ಶ್ರೀ ವೆಂಕಟೇಶ್ ಮೆಹೆಂದಳೆ ಜೀ ಯವರು ಯೋಗ ಬಂಧು ಗಳವರಿಗೆ ಅಭಿನಂದನೆ ಸಲ್ಲಿಸಿದರು.

ಪತಂಜಲಿ ಯೋಗ ಜಿಲ್ಲಾ ಪ್ರಭಾರಿ ಕೆ.ರಾಘವೇಂದ್ರ ಭಟ್ ಸ್ವಚ್ಛತಾ ಜಾಗ್ರತಿ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.ಮಹಿಳಾ ಜಿಲ್ಲಾ ಪ್ರಭಾರಿ ಶ್ರೀಮತಿ ಲೀಲಾ ಅಮೀನ್,ಯುವ ಪ್ರಭಾರಿ ಜಗದೀಶ್ ಕುಮಾರ್ ಹಾಗೂ ಸಮಸ್ತ ಕಕ್ಷದ ಯೋಗಬಂಧುಗಳವರು ಹಾಜರಾಗಿ ಕಾರ್ಯಕ್ರಮ ಯಶಸ್ವೀಗೊಳಿಸಿದರು.

 
 
 
 
 
 
 
 
 
 
 

Leave a Reply