ಪರ್ಯಾಯೋತ್ಸವದ ಪ್ರಯುಕ್ತ ಸಂಗೀತ ರಸಮಂಜರಿ ಕಾರ್ಯಕ್ರಮ

ಉಡುಪಿ ಪರ್ಯಾಯೋತ್ಸವದ ಪ್ರಯುಕ್ತ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್, ಬಾಳಿಗಾ ಆರ್ಕೇಡ್ ಅಸೋಸಿಯೇಷನ್, ಗೀತಾಂಜಲಿ ಸಿಲ್ಕ್ಸ್ ಮತ್ತು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಇವರ ಸಹಯೋಗದೊಂದಿಗೆ ಶ್ರೀ ಚಂದ್ರಕಾಂತ್ ಆಚಾರ್ಯ ನೇತೃತ್ವದ ಸರ್ಗಮ್ ಸ್ಟಾರ್ ನೈಟ್ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವು ಬಾಳಿಗಾ ಆರ್ಕೇಡ್ ಎದುರುಗಡೆ ನಡೆಯಿತು.

ಸಭಾ ಕಾರ್ಯಕ್ರಮವನ್ನು ಬಾಳಿಗಾ ಆರ್ಕೇಡ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಶ್ರೀ ರಂಜನ್ ಕೆ.ಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಪು ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ನಗರಸಭೆಯ ಶ್ರೀ ರಮೇಶ್ ಕಾಂಚನ್, ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ವಿಷ್ಣುಮೂರ್ತಿ ಆಚಾರ್ಯ, ಮುಖ್ಯ ಸಲಹೆಗಾರರಾದ ಶ್ರೀ ಎಸ್. ಕುಮಾರಸ್ವಾಮಿ ಉಡುಪ, ಗೀತಾಂಜಲಿ ಸಿಲ್ಕ್ಸ್ ರಾಮಕೃಷ್ಣ ನಾಯಕ್ ಆರ್.ಕೆ., ಬಾಳಿಗಾ ಆರ್ಕೇಡ್‌ನಲ್ಲಿರುವ ಸಿಟಿ ಗರ್ಲ್ಸ್ನ ಶ್ರೀ ಕೃಷ್ಣ ಎಮ್. ಸಾಲ್ಯಾನ್, ಕನ್ನರ್ಪಾಡಿ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಮತಿ ನಿರುಪಮಾ ಪ್ರಸಾದ್ ಶೆಟ್ಟಿ, ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಶ್ರೀ ಹಫೀಜ್ ರೆಹಮಾನ್, ಹಾಗೂ ಅಡಿಟರ್ & ಟ್ಯಾಕ್ಸ್ ಪ್ರಾಕ್ಟೀಷನರ್ ಶ್ರೀ ಗಣೇಶ್ ಉರಾಳ ಹಾಗೂ ಶ್ರೀ ವಾಮನ್ ಬಾಳಿಗಾ ಭಾಗವಹಿಸಿದ್ದರು.

ಬಾಳಿಗಾ ಆರ್ಕೇಡ್ ಅಸೋಸಿಯೇಷನ್‌ನ ಸದಸ್ಯರಾದ ಶ್ರೀ ವೆಂಕಟೇಶ್ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಇನ್ನೋರ್ವ ಸದಸ್ಯರಾದ ಶ್ರೀ ಮಧು ಪಾಟೀಲ್ ಧನ್ಯವಾದ ಸಮರ್ಪಿಸಿದರು. ಪ್ರತಿ ಬಾರಿಯಂತೆ ಈ ಬಾರಿಯೂ ರಸಮಂಜರಿ ಕಾರ್ಯಕ್ರಮದಲ್ಲಿ ಉಳಿದ ಮೊತ್ತವನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ನೀಡಲಾಯಿತು.

 
 
 
 
 
 
 
 
 
 
 

Leave a Reply