ಮಲ್ಪೆಯ ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಗೆ 8 ರಾಜ್ಯದ 9 ಗ್ರಾಮೀಣ ಬ್ಯಾಂಕ್ ಗಳ ಶಾಖಾ ಪ್ರಬಂಧಕರುಗಳ ಭೇಟಿ

ಮಲ್ಪೆಯ ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಗೆ ಪಂಜಾಬ್, ಮಧ್ಯಪ್ರದೇಶ, ಹರಿಯಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಹೀಗೆ 8 ರಾಜ್ಯದ 9 ಗ್ರಾಮೀಣ ಬ್ಯಾಂಕ್ ಗಳ ಶಾಖಾ ಪ್ರಬಂಧಕರು ಭೇಟಿ ನೀಡಿ ವಿಚಾರ ವಿನಿಮಯ ನಡೆಸಿದರು.

ರುಡ್ಸೆಟ್ ಮಾರ್ಗದರ್ಶನದೊಂದಿಗೆ ಈ ಭೇಟಿ ನಡೆಯಿತು. ಒಟ್ಟು 30 ಜನ ಪ್ರಬಂಧಕರು ಹಾಗೂ ನಾಬರ್ಡ್ ನ ಡಿ.ಜಿ.ಎಮ್. ಸಂಧ್ಯಾ ನಾಗರಾಜ್ ಭಾಗವಹಿಸಿದ್ದರು.

ಸಂಸ್ಥೆಯ ಮಾಲಕ ಎಮ್ ಮಹೇಶ್ ಕುಮಾರ್ ರವರು ತಾವು ನಡೆದು ಬಂದ ಯಶೋಗಾಥೆಯನ್ನು ಎಳೆಎಳೆಯಾಗಿ ಬಿಚ್ಚಿತ್ತರು. ಆಗಮಿಸಿದ ಪ್ರಬಂಧಕರು ಹಾಗೂ ಡಿ.ಜಿ ಎಮ್ ರವರು ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಶ್ಲಾಘಿಸಿದರು

 
 
 
 
 
 
 
 
 
 
 

Leave a Reply