ಕುಂದಾಪುರ: ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ ಮತ್ತು ಕುಂದಾಪುರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಕೋಟೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶೀರೂರು ಮಠಾಧೀಶರಾದ ಶ್ರೀಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರು “ಅಪ್ಪಣ್ಣ ಹೆಗ್ಡೆ ಜೀವಮಾನ ಸಾಧನಾ ಪ್ರಶಸ್ತಿ-2024” ಪ್ರಶಸ್ತಿಯನ್ನು “ಸಂಜೆ ಪ್ರಭ” ಪತ್ರಿಕೆಯ ಸಂಪಾದಕರಾದ ವೆಂಕಟೇಶ್ ಪೈ ಯವರಿಗೆ ನೀಡಿ ಆಶೀರ್ವಚಿಸಿದರು
ಈ ಸಂದರ್ಭದಲ್ಲಿ ಎಸ್.ಸತೀಶ್ ಕುಮಾರ್, ಆನಂದ ಬಿಳಿಯಾರ, ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಗುಲಾಬಿಯಮ್ಮ, ಕೆ.ಆರ್.ನಾಯಕ್, ಗಣೇಶ ಶೆಟ್ಟಿ, ರಮೇಶ್.ಎಚ್.ಎಸ್, ಮಂಜುನಾಥ್ ಕುಂದರ್, ಗಣಪತಿ.ಟಿ ಶ್ರೀಯಾನ್ ಮುಂತಾದವರು ಉಪಸ್ಥಿತರಿದ್ದರು.