ಪರ್ಕಳ ಏರು ಹತ್ತಲಾರದೆ ಕೆಳಗಿಳಿದ ಕಾರು!

ಪರ್ಕಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕೆನರಾ ಬ್ಯಾಂಕಿನ ತಿರುವಿನಲ್ಲಿ ಹಳೆ ರಸ್ತೆಗೆ ಸಂಬಂಧಿಸಿದಂತೆ ನಿರ್ಮಾಣವಾಗಿರುವ ಏರುದೆಣ್ಣೆ ಏರಲಾಗದೆ ಕಾರೊಂದು ನಿಯಂತ್ರಣ ತಪ್ಪಿ ಹೊಸದಾಗಿ ನಿರ್ಮಿಸಿದ ಆವರಣವಿಲ್ಲದ ತೋಡನ್ನೇರಿ ಸರ್ಕಸ್ ಮಾಡಿದೆ.

ಈ ಕಾರು ಉಡುಪಿಯಿಂದ ಬೆಂಗಳೂರಿನ ಕಡೆ ಸಂಚರಿಸುತ್ತಿತ್ತು ಎಂದು ತಿಳಿದುಬಂದಿದೆ. ಶಾಸಕರು ಈ ಹಿಂದೆ 15 ದಿನದೊಳಗೆ ಈ ರಸ್ತೆಗೆ ಕಾಂಕ್ರೀಟ್ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಭರವಸೆ ಕೊಟ್ಟು ಇದೀಗ ಮೂರು ತಿಂಗಳು ಕಳೆದಿದೆ. ಈ ಇಳಿಜಾರಿನಲ್ಲಿ ದಿನನಿತ್ಯ ದ್ವಿಚಕ್ರ ವಾಹನ ಚಾಲಕರು ಬೀಳೋದು ವಾಡಿಕೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಕೂಡಲೇ ಕಾಂಕ್ರೆಟ್ ರಸ್ತೆ ಮಾಡಬೇಕು ಸುಗಮ ಸಂಚಾರಕ್ಕೆ ಅನುವು ಮಾಡಬೇಕೆಂದು ಆಗ್ರಹಿಸಿದ್ದಾರೆ.

 
 
 
 
 
 
 
 
 
 
 

Leave a Reply