ಪಣಿಯಾಡಿಯ ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಗೆ ಶ್ರೀ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ಭೇಟಿ

ಉಡುಪಿಯ ಇತಿಹಾಸ ಪ್ರಸಿದ್ಧವಾದ ಮಧ್ವವಿಜಯದ ವ್ಯಾಖ್ಯಾನವಾದ ಭಾವಪ್ರಕಾಶಿಕಾದಲ್ಲಿ ದಾಖಲೆಗೊಂಡ, ಮಧ್ವಾನುಜರಾದ ಶ್ರೀವಿಷ್ಣುತೀರ್ಥರು ಸಾಧನೆ ಮಾಡಿರುವ, ಇತ್ತೀಚೆಗೆ ಭವ್ಯವಾಗಿ ಜೀರ್ಣೋದ್ಧಾರಗೊಂಡ, ಶ್ರೀ ಪುತ್ತಿಗೆ ಮಠದ ಆಡಳಿತಕ್ಕೆ ಒಳಪಟ್ಟ ಪಣಿಯಾಡಿಯ ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಗೆ ಆಡಳಿತ ಮಂಡಳಿಯ ಪ್ರಾರ್ಥನೆಯಂತೆ ಶ್ರೀ ಉತ್ತರಾದಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ಆಗಮಿಸಿ ದೇವರ ದರ್ಶನ ಪಡೆದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಶ್ರೀ ಪುತ್ತಿಗೆ ಮಠದ ದಿವಾನರಾದ ಎಮ್.ನಾಗರಾಜಾಚಾರ್ಯರು ಮತ್ತು ಎಮ್ ಪ್ರಸನ್ನ ಆಚಾರ್ಯರು ಶ್ರೀಗಳನ್ನು ಸ್ವಾಗತಿಸಿ ಸಂಸ್ಥಾನ ಗೌರವವನ್ನು ಸಮರ್ಪಿಸಿದರು

 
 
 
 
 
 
 
 
 
 
 

Leave a Reply