ಮಂದಾರ್ತಿ : ಸತೀಶ್ ಸಾಲ್ಯಾನ್ ರಿಗೆ ದೇಣಿಗೆ ಹಸ್ತಾಂತರ,ಸನ್ಮಾನ

ಮಂದಾರ್ತಿ :ಕಳೆದ ಎರಡು ವರ್ಷಗಳಿಂದ ಕೊರೋನಾ ಸಂಕಷ್ಟ ಸಂಧರ್ಭದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರದ ಆಯೋಜನೆ ಹಾಗೂ ನಿತ್ಯ ರಕ್ತದಾನಿಗಳ ಪೂರೈಕೆ ಮಾಡಿದ ಹೆಮ್ಮೆಯ ಸಂಸ್ಥೆ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ಜಿಲ್ಲಾಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ ಇವರಿಗೆ ಅಶೋಕ್ ಎಲ್.ಕುಂದರ್ ಮಂದಾರ್ತಿಯ ನೇತೃತ್ವದ ಸಮಾನ ಮನಸ್ಕ ಸ್ನೇಹಿತರ ಬಳಗ ಕುಂದಾಪುರ ತಂಡದಿಂದ ರೂ 51000 ದೇಣಿಗೆಯನ್ನು ಹಸ್ತಾಂತರಿಸಿದರು.

ತಂಡದ ಸದಸ್ಯ ಸುದಾಕರ ಕಾಂಚನ್ ಕಾರ್ಯಕ್ರಮ ನಿರೂಪಿಸಿ,ಚಂದ್ರ ಕಂಡ್ಲೂರು ವಂದಿಸಿದರು.

 
 
 
 
 
 
 
 
 
 
 

Leave a Reply