ಶ್ರೀ ಕೃಷ್ಣಮಂದಿರ ಭಜನಾ ಸಂಘದ ಆಶ್ರಯದಲ್ಲಿ ಕೋಟಿಗೀತಲೇಖನ ದೀಕ್ಷೆಯ ಸಭೆ

ಮಂಗಳೂರಿನ ಅಶೋಕ್ ನಗರದ ಶ್ರೀ ಕೃಷ್ಣ ಮಂದಿರದಲ್ಲಿ , ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯೋತ್ಸವದ ಯೋಜನೆಯಾದ ಕೋಟಿಗೀತಲೇಖನ ದೀಕ್ಷೆಯ ಸಭೆ ಶ್ರೀ ಕೃಷ್ಣಮಂದಿರ ಭಜನಾ ಸಂಘದ ಆಶ್ರಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಮಠದ ಗೀತಾ ಪ್ರಚಾರಕರಾದ ಶ್ರೀ ರಮೇಶ್ ಭಟ್ ಈ ಯೋಜನೆಯ ಮಹತ್ವ ಹಾಗೂ ಅದರ ರೂಪು ರೇಷೆಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಬಂದ ಶ್ರೀ ಶಾರದಾ ವಿದ್ಯಾಲಯದ ಆಡಳಿತ ನಿರ್ದೇಶಕರು ಹಾಗೂ ವಿಶ್ವ ಹಿಂದೂ ಪರಿಷತ್ ನ ಪ್ರಮುಖ ಸಂಚಾಲಕರಾದ ಶ್ರೀ ಎಂ.ಬಿ ಪುರಾಣಿಕರು ಭಾಗವಹಿಸಿದ್ದು. ,ದಂಪತಿ ಸಮೇತ ಗೀತಾ ಲೇಖನ ದೀಕ್ಷೆ ಪಡೆದು .ಶ್ರೀಗಳವರ ಪ್ರತಿ ಯೋಜನೆಯಲ್ಲೂ ನಮ್ಮ ಸಹಕಾರ ಇದ್ದೆ ಇದೆ ಎಂದು ತಿಳಿಸಿದರು. ಸುಮಾರು 40ಕ್ಕೂ ಹೆಚ್ಚು ಕೃಷ್ಣ ಭಕ್ತರು ಗೀತಾ ಲೇಖನದ ದೀಕ್ಷೆಯನ್ನು ಪಡೆದರು. ಸಂಘದ ಅಧ್ಯಕ್ಷರಾದ ಶ್ರೀಮತಿ ಭಾನುಮತಿ ಸುಮಂತ್ ಕುಮಾರ್ ಯವರು ಸ್ವಾಗತಿಸಿದರು ಶ್ರೀ ರವೀಂದ್ರ ಆಚಾರ್ಯರು ಧನ್ಯವಾದವಿತ್ತರು ಶ್ರೀಮತಿ ವೀಣಾ ಕೃಷ್ಣಮೂರ್ತಿ ಯವರು ಸಭೆಯನ್ನು ಸಂಯೋಜಿಸಿದ್ದರು

 
 
 
 
 
 
 
 
 
 
 

Leave a Reply