ಶ್ರೀಕೃಷ್ಣಮಠದಲ್ಲಿ, ಶ್ರೀವಾದಿರಾಜತೀರ್ಥರ ಆರಾಧನಾ ಪ್ರಯುಕ್ತ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ಸುವರ್ಣರಥದಲ್ಲಿ ವಾದಿರಾಜರ ಗ್ರಂಥ ಮತ್ತು ಭಾವಚಿತ್ರವನ್ನಿಟ್ಟು ವೈಭವದೊಂದಿಗೆ ಉತ್ಸವ ನಡೆಯಿತು.
ನಂತರ ರಾಜಾಂಗಣದಲ್ಲಿ ಸಮಾಜಕ್ಕೆ ವಾದಿರಾಜರ ಕೊಡುಗೆಗಳ ವಿಶೇಷ ಪ್ರವಚನ ನಡೆಯಿತು.