ಕರಾವಳಿ ಬೈಪಾಸ್ ಬಳಿಯ ಅಂಡರ್ ಪಾಸ್ ಕತ್ತಲಲ್ಲಿ: ಸಾರ್ವಜನಿಕರ ಆಕ್ರೋಶ

ಉಡುಪಿ ಬನ್ನಂಜೆ ಕರಾವಳಿ ಬೈಪಾಸ್ ಬಳಿಯ ಅಂಡರ್ ಪಾಸ್ ನಲ್ಲಿ ರಾತ್ರಿ ವೇಳೆ ವಿದ್ಯುತ್ ದೀಪವಿಲ್ಲದೆ ಕತ್ತಲೆ ಕವಿದ್ದಿದ್ದು ಸಾರ್ವಜನಿಕರ ಸುರಕ್ಷತೆ ಬಗ್ಗೆ ಗಂಭೀರ ಸವಾಲು ಎದುರಾಗಿದೆ .

ಈ ಪ್ರದೇಶದಲ್ಲಿ ರಾತ್ರಿ ವೇಳೆ ಸಾವಿರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚಾರ ಮಾಡುತ್ತಿದ್ದು ಅಪಘಾತಗಳು ಸಂಭವಿಸಿದರೆ ವಿದ್ಯುತ್ ದೀಪವಿಲ್ಲದೆ ಸಮಸ್ಯೆ ಎದುರಾಗುತ್ತಿದೆ . ಅಲ್ಲದೆ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

 ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ಈ ಸಮಸ್ಯೆ ಬಗ್ಗೆ ತುರ್ತು ಗಮನಹರಿಸಿ ಈ ಈ ಪ್ರದೇಶದಲ್ಲಿ ಕೆಟ್ಟು ನಿಂತಿರುವ ವಿದ್ಯುತ್ ದೀಪವನ್ನು ತಕ್ಷಣ ಸರಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

ಅಂಡರ್ ಪಾಸ್ನಲ್ಲಿ ಈ ಹಿಂದೆ ಇದ್ದ ಹೈ ಮಾಸ್ಟ್ ದೀಪಗಳು ಉರಿಯದೆ ತಿಂಗಳೇ ಕಳೆದಿದ್ದು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಇಲಾಖೆಯ ಸ್ಪಂದನೆಯನ್ನುಎತ್ತಿ ತೋರಿಸುತ್ತಿದೆ.ಮುಂದೆ ಯಾವುದಾದರೂ ಅನಾಹುತ ಸಂಬಂಧಿಸಿದ ಮೊದಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ

 
 
 
 
 
 
 
 
 
 
 

Leave a Reply