ವಿಶೇಷ ಚೇತನ ಮಕ್ಕಳ ಮನೆಯಾದ ‘ಆಸರೆ‘ಯನ್ನು ಬೆಂಬಲಿಸುವ ‘ಸಾಂಸ್ಕೃತಿಕ ಸಂಜೆ‘ ಕಾರ್ಯಕ್ರಮವನ್ನು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಇದೇ ಮೇ 14, 2023 ರಂದು ಸಂಜೆ 5.30 ಕ್ಕೆ ಕೆಎಂಸಿಯ ಡಾ ಟಿಎಂಎಪೈ ಹಾಲ್ ನಲ್ಲಿ ಆಯೋಜಿಸುತ್ತಿದೆ.
ಇಕೋಸೋಫಿ, ಎಸ್ಥೆಟಿಕ್ಸ್, ಪೀಸ್ ಮತ್ತು ಆರ್ಟ್ ಮೀಡಿಯಾದ ವಿದ್ಯಾರ್ಥಿಗಳು, ಸಮಾಜಕ್ಕೆ ಗಮನಾರ್ಹವಾದ ಸೇವೆಯನ್ನು ಸಲ್ಲಿಸುತ್ತಿರುವ ‘ಆಸರೆ‘ ಸಂಸ್ಥೆಯನ್ನು ಬೆಂಬಲಿಸುವ ಸಲುವಾಗಿ ‘ಶಾಂತಿಗಾಗಿ ಕಲೆ‘ ಎಂಬ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಕಾರ್ಯಕ್ರಮವು ನೃತ್ಯ ಮತ್ತು ಸಂಗೀತ ಕಚೇರಿಗಳನ್ನು ಒಳಗೊಂಡಿರುತ್ತದೆ. ನ್ಯೂಯಾರ್ಕ್ನ ಯುಎನ್ ರಿಲೇಷನ್ಸ್ ನ ವಿಮೆನ್ ಫೆಡರೇಶನ್ ಫಾರ್ ವರ್ಲ್ಡ್ ಪೀಸ್ ಇಂಟರ್ನ್ಯಾಷನಲ್ (ಡಬ್ಲ್ಯುಎಫ್ಡಬ್ಲ್ಯುಪಿಐ) ನಿರ್ದೇಶಕರಾದ ಮೆರ್ಲಿ ಬರ್ಲಾನ್, ಈ ಕಾರ್ಯಕ್ರಮವನ್ನು ಬೆಂಬಲಿಸಿ ಗೌರವ ಅತಿಥಿಗಳಾಗಿ ಆನ್ಲೈನ್ನಲ್ಲಿ ಹಾಜರಿರುತ್ತಾರೆ.
ಈ ಸದುದ್ದೇಶಕ್ಕೆ ಸಹಾಯ ಮಾಡಲು, ಕೊಡುಗೆ ನೀಡಲು ಮತ್ತು ಭಾಗವಹಿಸಲು ಉದ್ದೇಶಿಸಿರುವವರು – (ಆಫ್ಲೈನ್ ಅಥವಾ ಆನ್ಲೈನ್) ಪ್ರೊ ವರದೇಶ್ ಹಿರೇಗಂಗೆ (Ph 9902710092) ಅವರನ್ನು ಸಂಪರ್ಕಿಸಬಹುದು.