ವಲಸೆ ಕಾರ್ಮಿಕರಿಗೂ ಅಂಚೆ ಮೂಲಕ ಮತದಾನ ಕಲ್ಪಿಸಿ – ಅಧ್ಯಕ್ಷ ಚಿಕ್ಕಮಠ

ಮತದಾನ ಬಂದಾಗ ಮಾತ್ರ ಆಯಾ ಕ್ಷೇತ್ರದ ಅಭ್ಯರ್ಥಿಗಳು ಕ್ಷೇತ್ರದ ಜನರನ್ನು ನೆನಪಿಸಿಕೊಳ್ಳುತ್ತಾರೆ ಆಯಾ ಕ್ಷೇತ್ರದ ಜನರಿಗೆ ಆಗುತ್ತಿರುವ ತೊಂದರೆಗಳಿಗೆ ಯಾವ ಒಬ್ಬ ಶಾಸಕ ಸಚಿವರು ಸ್ಪಂದಿಸುತ್ತಿಲ್ಲ ಈಗಾಗಲೇ ಉತ್ತರ ಕರ್ನಾಟಕದ ಸುಮಾರು 50 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಉಡುಪಿ ಜಿಲ್ಲೆಯಾದ್ಯಂತ ನೆಲೆಸಿದ್ದು ಮತದಾನಕ್ಕೆ ತಮ್ಮ ತಮ್ಮ ಊರುಗಳಿಗೆ ತೆರಳಲು ಅನಾನುಕೂಲವಾಗುತ್ತಿದೆ, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ.

ಆಯಾ ಮತಕ್ಷೇತ್ರದ ಅಭ್ಯರ್ಥಿಗಳು ತಮ್ಮ ಮತಕ್ಷೇತ್ರದ ವಲಸೆ ಕಾರ್ಮಿಕರಿಗೆ ಅಂಚೆ ಮೂಲಕ ಮತದಾನವನ್ನು ಕಲ್ಪಿಸಿ ನಿಮ್ಮ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ.

~ಸಿದ್ದ ಬಸಪ್ಪ ಸ್ವಾಮಿ ಚಿಕ್ಕಮಠ

 
 
 
 
 
 
 
 
 
 
 

Leave a Reply