ಬಿರುವೆರ್ ಕುಡ್ಲ ದೇರಳಕಟ್ಟೆ ಘಟಕದ 9ನೇ ಸೇವಾ ಯೋಜನೆ

ಬಡವರ ಕಾಮಧೇನು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, SNDPS ಪ್ರಶಸ್ತಿ ಪುರಸ್ಕೃತ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನದ ಬಿರುದು ಪಡೆದ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಗಳ ತತ್ವ, ಆದರ್ಶಗಳ ಪ್ರಕಾರ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದೊಂದಿಗೆ, ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಉದ್ದೇಶದೊಂದಿಗೆ ನಿರಂತರ ಸಮಾಜಸೇವೆ ಮಾಡುತ್ತಿರುವ ಹೆಮ್ಮೆಯ ಬಿರುವೆರ್ ಕುಡ್ಲ, ಸಂಘಟನೆಯ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ ದೇರಳಕಟ್ಟೆ ಘಟಕದ 9ನೇ ಸೇವಾ ಯೋಜನೆ ಅಂಬ್ಲಮೊಗರು ಎಲ್ಯಾರ್ ಪದವು ನಿವಾಸಿಯಾದ ಗಾಯತ್ರಿ ಪೂಜಾರಿ ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇವರ ಚಿಕಿತ್ಸಾ ವೆಚ್ಚಕ್ಕೆ ನಮ್ಮ ಘಟಕದಿಂದ ತುರ್ತು ಸೇವಾ ಯೋಜನೆ ಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ, ದೇರಳಕಟ್ಟೆ ಘಟಕದ, ಅಧ್ಯಕ್ಷರು ಶ್ರೀ ಶ್ರವಣ್ ಪೂಜಾರಿ ಅಂಬ್ಲಮೊಗರು, , ಸಂಘಟನಾ ಕಾರ್ಯದರ್ಶಿಯಾದ ರಂಜಿತ್ ಪೂಜಾರಿ ವೈದ್ಯನಾಥ ನಗರ, ಕ್ರೀಡಾ ಕಾರ್ಯದರ್ಶಿಯಾದ ಸ್ವರೂಪ್ ಪೂಜಾರಿ ಕುಂಪಲ, ಘಟಕದ ಸದಸ್ಯರಾದ ಧೀರಜ್ ಪೂಜಾರಿ ಬರಿಕೆ, ಪ್ರಜ್ವಲ್ ಪೂಜಾರಿ ಅಂಬ್ಲಮೊಗರು, ಹಾಗೂ ಇತರ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply