ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಉಡುಪಿ ವಿಭಾಗ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ಹಸ್ತಾಂತರ

ಉಡುಪಿ: ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಉಡುಪಿ ವಿಭಾಗದ ವತಿಯಿಂದ ಉಡುಪಿ ಪ್ರೆಸ್ ಕ್ಲಬ್ ಬಿ ಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಹಸ್ತಾಂತರಿಸಲಾಯಿತು.

ವಿಭಾಗೀಯ ವ್ಯವಸ್ಥಾಪಕ ಮಂಜುನಾಥ ಐ ಎಂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಇವರಿಗೆ ಹಸ್ತಾಂತರಿಸಿದರು. ಏರಿಯಾ ಮೆನೇಜರ್ ಪ್ರದೀಪ್ ಕುಮಾರ್ ಬಿಎಸ್ ಶಾಖಾ ವ್ಯವಸ್ಥಾಪಕ ರಘು ಎಸ್ ಮತ್ತು ಸದಸ್ಯರಾದ ದೀಪಕ್ ಜೈನ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply