ರೋಟರಿ ಉಡುಪಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಗ್ರಿ ವಿತರಣೆ

ಉಡುಪಿ: ರೋಟರಿ ಉಡುಪಿಯಿಂದ ಕಡೆಕಾರು ಗ್ರಾಮದ 7 ಜನ ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಗ್ರಿಗಳನ್ನು ನೀಡಲಾಯಿತು. ಕೊರೊನಾ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯು ಶ್ಲಾಘನೀಯವಾದುದು, ರೋಟರಿಯಿಂದ ನೀಡಿದ ಈ ಸಹಾಯ ಸುತ್ಯರ್ಹ ಎಂದು ಕಡೆಕಾರು ಪಂಚಾಯತ ಉಪಾಧಕ್ಷ ನವೀನ್ ಶೆಟ್ಟಿ ಯವರು ಹೇಳಿದರು.

ರೋಟರಿ ಅಧ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ,ಕಾರ್ಯದರ್ಶಿ ರೋ.ದೀಪಾ ಭಂಡಾರಿ, ರೋ.ಬಿ.ವಿ.ಲಕ್ಷ್ಮೀನಾರಾಯಣ, ರೋ. ರಾಮಚಂದ್ರ ಉಪಾಧ್ಯಾಯ,ರೋ. ದಿನೇಶ್ ಭಂಡಾರಿ,ರೋ.ವನಿತಾ ಉಪಾಧ್ಯಾಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಸಿದ್ದೇಶ್ ಎಸ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply