ಹಾರಾಡಿ ಎ.ವಿ ಬಾಳಿಗಾ ಸ್ಮಾರಕ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಬ್ರಹ್ಮಾವರ – ವೈದ್ಯಕೀಯ ಪ್ರಕೋಷ್ಟ ಉಡುಪಿ ಜಿಲ್ಲೆ, ವಸಂತಿ ಎ ಪೈ ಪ್ರತಿಷ್ಟಾನ ಮಣಿಪಾಲ ಮತ್ತು ವೈದ್ಯಕೀಯ ಪ್ರತಿನಿಧಿಗಳ ಸಂಘ ಇದರ ಆಶ್ರಯದಲ್ಲಿ ಸೆ.12 ರಂದು ಹಾರಾಡಿ ಎ.ವಿ ಬಾಳಿಗಾ ಸ್ಮಾರಕ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಸೆಲ್ಕೊ ಸೋಲಾರ್ ಸಂಸ್ಥೆಯ ಡಿಜಿಎಂ ಜಗದೀಶ್ ಪೈ ಉದ್ಘಾಟಿಸಿ ಶುಭ ಹಾರೈಸಿದರು. ವೈದ್ಯಕೀಯ ಪ್ರಕೋಷ್ಠ ಜಿಲ್ಲಾ ಸಂಚಾಲಕ ಡಾ.ರಾಮಚಂದ್ರ ಕಾಮತ್ ಮಾತನಾಡಿ, ಮುಂದಿನ ದಿನಗಳಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಕಡೆಗಳಲ್ಲಿ ವೈದ್ಯಕೀಯ ಶಿಬಿರ ಅದೇ ರೀತಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ವಿವಿಧ ವಿಷಯಗಳ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಲಿದೆ.ಮಾನಸಿಕ ಆರೋಗ್ಯದ ಮತ್ತು ದೈಹಿಕ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಬೇಕೆಂದರು.

ವೇದಿಕೆಯಲ್ಲಿ ಖ್ಯಾತ ವೈದ್ಯ ಡಾ. ಜಯಪ್ರಕಾಶ್ ಬೆಳ್ಳೆ, ಡಾ. ನರಸಿಂಹ ಭಟ್, ಡಾ. ರವೀಂದ್ರ, ಡಾ. ಸನತ್ ಎಸ್ ರಾವ್, ಡಾ. ವಿದ್ಯಾಧರ ಶೆಟ್ಟಿ,ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ಮಧುಸೂಧನ್ ಹೇರೂರು, ಪ್ರಸನ್ನ ಕಾರಂತ್, ನರ್ಸಿಂಗ್ ಮುಖ್ಯಸ್ಥೆ ಲಿಲ್ಲಿ ಮುಂತಾದವರಿದ್ದರು ಉಪಸ್ಥಿತರಿದ್ದರು. ರಾಘವೇಂದ್ರ ಕರ್ವಾಲು ನಿರೂಪಿಸಿದರು.

 
 
 
 
 
 
 
 
 
 
 

Leave a Reply