ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ರಾಯಣ್ಣನ ಪುಣ್ಯಭೂಮಿ ನಂದಘಡಕ್ಕೆ ಬೇಟಿ

ಕರಾವಳಿಯ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರು ಹುಟ್ಟು ಹಬ್ಬದ ಪ್ರಯುಕ್ತ ಪುಣ್ಯಭೂಮಿ ನಂದಘಡಕ್ಕೆ ಬೇಟಿ ನೀಡಿ ರಾಯಣ್ಣನ ಸಮಾಧಿಗೆ ಪುಷ್ಪಾರ್ಚನೆಗೈದು ಆರತಿ ಬೆಳಗಿದರು.
ಬಳಿಕ ನಂದಗಢದ ಆವರಣದಲ್ಲಿ ಅಮೃತ ಭಾರತಿಗೆ  ಕನ್ನಡದ ಆರತಿ ಶೀರ್ಷಿಕೆಯ ಶಿಲಾನ್ಯಾಸ ಮತ್ತು ಭೂಮಿ ಪೂಜೆಯನ್ನು ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ಮತ್ತು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ನೆರವೇರಿಸಿದರು.
ಇದೆ ಪುಣ್ಯ ಭೂಮಿಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಶಿಲಾನ್ಯಾಸವನ್ನು ಶನಿವಾರ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಹಾಗು ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾದ ಸುನಿಲ್ ಕಾರ್ಕಳ ಇವರು ನೆರವೇರಿಸಲಿದ್ದಾರೆ.   
ಈ ಸಂದರ್ಭದಲ್ಲಿ ನಂದಘಗಢ ಪ್ರಾಧಿಕಾರದ ಶಂಕ್ರಣ್ಣ, ಹುಬ್ಬಳ್ಳಿ ಅಭಿಮಾನಿ ಬಳಗದ ಯಲ್ಲಪ್ಪ, ರಾಮಣ್ಣ, ಪ್ರವೀಣ್, ಉಡುಪಿಯ ಆನಂದ್, ಹನುಮಂತ ಮತ್ತು ರಾಯಣ್ಣ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು. 
 
 
 
 
 
 
 
 
 
 
 

Leave a Reply