ಚೈಲ್ಡ್ ಲೈನ್-1098, ಉಡುಪಿ ಮತ್ತು ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್ ಉಡುಪಿಯ ಸಹಯೋಗದೊಂದಿಗೆ ಹೆಣ್ಣು ಮಕ್ಕಳಿಗೆ ಅರಿವು ಕಾರ್ಯಕ್ರಮ

ಉಡುಪಿ : ಚೈಲ್ಡ್ ಲೈನ್-1098, ಉಡುಪಿ ಮತ್ತು ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್ ಉಡುಪಿ ಇವರ ಸಹಯೋಗದೊಂದಿಗೆ ದುಗ್ಲಿಪದವು, ಮಂಚಿ ಇಲ್ಲೀನ ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ, ಹದಿಹರೆಯದ ಹೆಣ್ಣು ಮಕ್ಕಳಿಗೆ ಚೈಲ್ಡ್ ಲೈನ್-1098ರ ಸೇವೆಗಳು, ಮಕ್ಕಳ ರಕ್ಷಣಾ ವ್ಯವಸ್ಥೆಗಳು, ಪೋಕ್ಸೋ ಇನ್ನಿತರ ಕಾಯಿದೆಗಳು, ಹದಿಹರೆಯದ ಮಕ್ಕಳ ಸಮಸ್ಯೆಗಳು, ವೈಯಕ್ತಿಕ ಸ್ವಚ್ಚತೆ ಮತ್ತು ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಚೈಲ್ಡ್ ಲೈನ್-1098 ಉಡುಪಿಯ ನಿರ್ದೇಶ ರಾಮಚಂದ್ರ ಉಪಾಧ್ಯಾ ಪ್ರಾಸ್ತಾವಿಕ ನುಡಿಗಳನ್ನಾಡಿ, ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತಿಸಿದರು. ಹೆಣ್ಣುಮಕ್ಕಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ಸಂದರ್ಭದಲ್ಲಿ ಅಡ್ಡ ದಾರಿಯನ್ನು ತುಳಿಯಬಾರದು ಎಂದು ತಿಳಿಸಿದರು. ಅಲ್ಲದೇ ಮಕ್ಕಳು ತಮ್ಮ ಭವಿಷ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಮಾರಕವಾಗುವಂತಹ ಚಟುವಟಿಕೆಗಳಿಂದ ದೂರವಿರುವಂತೆ ತಿಳಿಸಿದರು. 

 ಚೈಲ್ಡ್ ಲೈನ್-1098 ಉಡುಪಿಯ ಸದಸ್ಯೆ ಸುನಿತಾ ಚೈಲ್ಡ್ ಲೈನ್-1098 ಇದರ ಸೇವೆಗಳ ಕುರಿತು ಮತ್ತು ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಚೈಲ್ಡ್ ಲೈನ್ ಸಹ ನಿರ್ದೇಶಕರಾದ ಶ್ರೀಯುತ ಗುರುರಾಜ್ ಭಟ್‌ರವರು ನೆರೆದಿದ್ದವರೆಲ್ಲರಿಗೂ ಕೋವಿಡ್ ಲಸಿಕೆಯ ಮಹತ್ವದ ಕುರಿತು ಮತ್ತು ಕರೋನಾ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು. 

ಅಲ್ಲದೇ ಶುಚಿತ್ವದ ಕುರಿತು ಮತ್ತು ಸ್ವಚ್ಛವಾಗಿ ಕೈ ತೊಳೆಯುವ ಕ್ರಮವನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಅಲ್ಲದೇ ಮಕ್ಕಳೆಲ್ಲರೂ ತಮ್ಮ ಸುತ್ತಮುತ್ತಲಿನ ಪರಿಸರದ ಕುರಿತು ಕಾಳಜಿಯನ್ನು ಹೊಂದಿರಬೇಕು ಮತ್ತು ಅದನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕಾಗಿ ತಿಳಿಸಿದರು. 

ನಂತರ ಚೈಲ್ಡ್ ಲೈನ್ ಆಪ್ತಸಮಾಲೋಚಕಿ ಜ್ಯೋತಿ ಮಕ್ಕಳಿಗೆ ಬಾಲ್ಯ ವಿವಾಹ ನಿಷೇಧ ಕಾಯಿದೆ, ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ, ಬಾಲ ನ್ಯಾಯ ಕಾಯಿದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಹಾಗೂ ಪೋಕ್ಸೋ ಕಾಯಿದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು. ಅಲ್ಲದೇ ಶಿಕ್ಷಣ ಕಲಿಯುವ ಸಂದರ್ಭದಲ್ಲಿ ಪ್ರೀತಿ ಪ್ರೇಮ ಇತ್ಯಾದಿ ಆಕರ್ಷಣೆಗಳಿಂದ ದೂರವಿರುವಂತೆ ತಿಳಿಸಿದರು. ಅಲ್ಲದೇ ಮಕ್ಕಳು ಅಪರಿಚಿತರ ಕುರಿತಾಗಿ ಸದಾ ಎಚ್ಚರದಿಂದ ಇರಬೇಕು ಎಂದು ಹೇಳಿದರು. 

ಅಲ್ಲದೇ ಅಸುರಕ್ಷಿತ ಸ್ಪರ್ಶಗಳ ಕುರಿತು ಅರಿವು ಮೂಡಿಸಿದರು. ಅಲ್ಲದೇ ಯಾವುದೇ ರೀತಿಯಾದ ಸಮಸ್ಯೆ ಅಥವಾ ದೌರ್ಜನ್ಯಗಳಾದಲ್ಲಿ ಚೈಲ್ಡ್ ಲೈನ್-1098 ಇದಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯಲು ತಿಳಿಸಿದರು. 

ನಂತರ ನೆರೆದಿದ್ದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು. ಅಲ್ಲದೇ ನಂತರ ನೆರೆದಿದ್ದ ಮಕ್ಕಳಿಗೆ ತಮ್ಮ ವೈಯಕ್ತಿಕ ಸಮಸ್ಯೆಗಳ ಕುರಿತು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವನ್ನು ನೀಡಲಾಯಿತು. ನೆರೆದಿದ್ದವರೆಲ್ಲರಿಗೂ ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್‌ನ ವತಿಯಿಂದ ಉಪಹಾರ ನೀಡಲಾಯಿತು.

ಚೈಲ್ಡ್ ಲೈನ್-1098, ಉಡುಪಿಯ ಸಹ ನಿರ್ದೇಶಕ ಸುಹಾನಿ ಕಾಮತ್, ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಮೇಘನಾ ರಾವ್, ಚೈಲ್ಡ್ ಲೈನ್-1098 ಉಡುಪಿ ಇದರ ಸ್ವಯಂ ಸೇವಕ ಮೋಹನ್, ಅಂಗನವಾಡಿ ಕಾರ್ಯಕರ್ತೆ ಶಕುಂತಲಾ, ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್‌ನ ಸದಸ್ಯರು, ಚೈಲ್ಡ್ ಲೈನ್ ಸಿಬ್ಬಂದಿಗಳು ಮತ್ತು ಸ್ಥಳೀಯ ಹೆಣ್ಣು ಮಕ್ಕಳು ಭಾಗವಹಿಸಿದ್ದರು.  

ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿ ನಯನ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್‌ನ ಕಾರ್ಯದರ್ಶಿ ತನ್ವಿ ವಶಿಷ್ಠ ವಂದಿಸಿದರು.

 
 
 
 
 
 
 
 
 
 
 

Leave a Reply