ಬೆಂಗಳೂರು : ಶ್ರೀ ಪೇಜಾವರ ಅಧೋಕ್ಷಜ ಮಠದ ಪ್ರಾತಃಸ್ಮರಣೀಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಕರಕಮಲ ಸಂಜಾತ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸನ್ನಿಧಿಯಲ್ಲಿ ಸರ್ವಜ್ಞಕಲ್ಪ ಶ್ರೀಮಜ್ಜಯತೀರ್ಥ ಶ್ರೀಮಚ್ಚರಣ ವಿರಚಿತ ಶ್ರೀಮನ್ನ್ಯಾಯಸುಧಾ ಉದ್ಗ್ರಂಥದ ಮಂಗಳವನ್ನು ಶ್ರೀಮದುತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ ಗೌರವ ಉಪಸ್ಥಿತಿಯಲ್ಲಿ ಅನೇಕ ಬಹುಶ್ರುತ ವಿದ್ವಾಂಸರ ಸಮ್ಮುಖದಲ್ಲಿ ಪರೀಕ್ಷೆ ನಡೆಯಿತು.
ಅದ್ಬುತವಾಗಿ ನಿರರ್ಗಳವಾಗಿ ಸಂಸ್ಕ್ರತದಲ್ಲೇ ಅನುವಾದ ಮಾಡಿ ಶೇಕಡಾ 97% ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ಯಾರ್ಥಿ ಬ್ರಹ್ಮಾವರ ಉಮಾನಾಥ್ ಭಟ್ ರ ಸುಪುತ್ರ ಬ್ರಹ್ಮಾವರ ರಾಮಕೃಷ್ಣ ಭಟ್ ಗೆ ಸಮಸ್ತ ಸಾರಸ್ವತ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.