ಉಡುಪಿ: ​ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್‌ ಮುಳುಗಡೆ​​

ಉಡುಪಿ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್‌ ಮಹಾರಾಷ್ಟ್ರದ ರತ್ನಗಿರಿ ಭಾಗದಲ್ಲಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 7 ಮೀನುಗಾರರನ್ನು ರಕ್ಷಿಸಲಾಗಿದೆ.​ ಭಗವಾನ್ ದಾಸ್ ಕೋಟ್ಯಾನ್ ಅವರ ದಿವ್ಯಶಕ್ತಿ ಹೆಸರಿನ ಬೋಟ್‌ ಏ.10ರಂದು ಮೀನುಗಾರಿಕೆಗೆ ತೆರಳಿತ್ತು.​ ಮೀನುಗಾರಿಕೆ ಮಾಡುವಾಗ ಬೋಟ್‌ನ ತಳಭಾಗ‌ ಅಪಘಾತಕ್ಕೆ ತುತ್ತಾಗಿ ಮುಳುಗಡೆಯಾಗಿದ್ದು, ಹತ್ತಿರದಲ್ಲಿದ್ದ ಇತರ ಬೋಟ್‌ಗಳವರು ನೆರವಿಗೆ ಧಾವಿಸಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.​ ಮೀನುಗಾರರನ್ನು ಮಲ್ಪೆ ಬಂದರಿಗೆ ಕರೆತರಲಾಗಿದೆ

 
 
 
 
 
 
 
 
 
 
 

Leave a Reply