ಬ್ರಾಹ್ಮಣ ಮಹಾ ಸಭಾ ಕೊಡವೂರು- ಆರ್ಥಿಕ ಸಹಾಯ ಧನ ರೂ.ಎರಡು ಲಕ್ಷ ಹಸ್ತಾಂತರ

ಮನೆಯಲ್ಲಿ ವಯಸ್ಸಾದ , ಅನಾರೋಗ್ಯ ಪೀಡಿತರಾದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು ಇದೀಗ ಇಹಲೋಕ ತ್ಯಜಿಸಿದ ತಂದೆ ಹಾಗು ಕ್ಯಾನ್ಸರ್ ಪೀಡಿತ ತಾಯಿಯವರ ಸೇವೆಯನ್ನು ತಮ್ಮ ಅಂಧತ್ವದ ಅಸಹಾಯಕ ಪರಿಸ್ಥಿತಿಯಲ್ಲೂ ಮಾಡುತ್ತಿರುವ ಕೊಡವೂರು ಮೂಡುಬೆಟ್ಟು ಮಧ್ವನಗರದ ನಿವಾಸಿ ರಾಮಕೃಷ್ಣ ಭಟ್ ಇವರ ಅಸಹಾಯಕತೆಯನ್ನು ಪರಿಶೀಲಿಸಿ ಕೊಡವೂರು ಬ್ರಾಹ್ಮಣ ಮಹಾ ಸಭಾ ತನ್ನ ಸದಸ್ಯರಿಂದ ಸುಮಾರು ರೂಪಾಯಿ ಎರಡು‌ ಲಕ್ಷ ದಷ್ಟು ದೇಣಿಗೆ ಸಂಗ್ರಹಿಸಿ ರಾಮಕೃಷ್ಣ ಭಟ್ ಹಾಗು ಅವರ ಪತ್ನಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಶ್ರೀ ಕೃಷ್ಣ ಕೊಡಂಚ, ಶ್ರೀಶ ಭಟ್ ಮೂಡಬೆಟ್ಟು , ಕೊಡವೂರು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಶ್ರೀನಿವಾಸ ಉಪಾಧ್ಯಾಯ, ಪದಾಧಿಕಾರಿಗಳಾದ ಮಂಜುನಾಥ ಭಟ್, ಲಕ್ಷ್ಮೀನಾರಾಯಣ ಭಟ್,ಚಂದ್ರಶೇಖರ ರಾವ್,ಶ್ರೀನಿವಾಸ ಬಾಯರಿ, ಸುರೇಶ್ ಭಟ್, ಕೋಶಾಧಿಕಾರಿ ಶ್ರೀಧರ ಶರ್ಮ ಹಾಗು ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಉಪಸ್ಥಿತಿತರಿದ್ದರು.

 
 
 
 
 
 
 
 
 
 
 

Leave a Reply