ಬಿಜೆಪಿ ಕಾಪು ಮಂಡಲ- ಮೋದೀಜಿ ಆಡಳಿತದ ಸಾಧನೆಯ ಕರಪತ್ರ ನೀಡಿ ನಿರಂತರ ಸಹಕಾರ ನೀಡಲು ಮನವಿ‌

ಮೋದೀಜಿ ಆಡಳಿತದ 8 ನೇ ವರ್ಷದ ಆಚರಣೆಯ ಪ್ರಯುಕ್ತ ಇಂದು ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಂಗ್ರಪಾಡಿ ಹಾಗೂ ಮಾರ್ಪಳ್ಳಿಯಲ್ಲಿ ಹಲವು ಮನೆಗಳಿಗೆ ಭೇಟಿ ನೀಡಿ ಸಾಧನೆಯ ಕರಪತ್ರ ನೀಡಿ ಮೋದೀಜಿಯವರಿಗೆ ನಿರಂತರ ಸಹಕಾರ ನೀಡಲು ಮನವಿ‌ ಮಾಡಿದೆವು.

ಈ ಸಂದರ್ಭದಲ್ಲಿ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಯನ ಗಣೇಶ್, ಕಾಪು ಮಂಡಲ ಬಿಜೆಪಿ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಅಲೆವೂರು ಪಂಚಾಯತ್ ಸದಸ್ಯರುಗಳಾದ ಪುಷ್ಪಲತಾ ಮಾರ್ಪಳ್ಳಿ, ಶಾಂತ ನಾಯ್ಕ್, ಸೌಮ್ಯ ನಾಯಕ್, ಗೀತಾ ಶೆಟ್ಟಿಗಾರ್, ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯರಾದ ಬೇಬಿ ರಾಜೇಶ್, ಮಾಜಿ ಸದಸ್ಯರಾದ ಪ್ರೇಮ, ಕಾಪು ಬಿಜೆಪಿ ಯುವಮೋರ್ಚ ಕಾರ್ಯಕಾರಿಣಿ ಸದಸ್ಯರಾದ ಅರುಣ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply