ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ನೇತಾರನಿಗೆ ಶ್ರದ್ಧಾಂಜಲಿ

ಉಡುಪಿ: ರಾಜಕೀಯ ಎದುರಾಳಿಗಳನ್ನೂ ವೈಯಕ್ತಿಕವಾಗಿ ಗೌರವಿಸುತ್ತಿದ್ದ ಅಸ್ಕರ್‌ ಫರ್ನಾಂಡಿಸ್‌ ಮಾದರಿ ರಾಜಕಾರಣಿ. ರಾಜಕೀಯ ಮೇಲಾಟ ಕೇವಲ ಚುನಾವಣೆಗೆ ಮಾತ್ರ ಸೀಮಿತಗೊಳಿಸಿದ್ದ ಅವರು, ಹಗೆತನದ ರಾಜಕೀಯಕ್ಕೆ ಅವಕಾಶ ನೀಡಿರಲಿಲ್ಲ ಎಂದು ಶಾಸಕ ಕೆ.ರಘುಪತಿ ಭಟ್‌ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಸ್ಕರ್‌ ಫರ್ನಾಂಡಿಸ್‌ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು. ಪ್ರತಿಪಕ್ಷದ ನಾಯಕನಿಗೆ ಪಕ್ಷದ ಕಚೇರಿಯಲ್ಲಿ ಶ್ರದ್ಧಾ೦ಜಲಿ ಸಲ್ಲಿಸುವ ಸಂಸ್ಕೃತಿ ಬೇರೆ ಯಾವುದೇ ಜಿಲ್ಲೆಯಲ್ಲಿ ಕಾಣಲು ಸಾಧ್ಯವಿಲ್ಲ. 

ವಿರೋದ ಪಕ್ಷದ ಶಾಸಕನಿಗೂ ಸಹಾಯ ಮಾಡುವ “ಮಾನವೀಯ ಗುಣ ಅವರಲ್ಲಿತ್ತು. ಇದೇ ಕಾರಣಕ್ಕೆ ಸ್ಟ ಪಕ್ಷೀಯರಿಂದಲೇ ವಿರೋಧ ಎದುರಿಸಬೇಕಾಗಿ ಬಂದದ್ದು ಖೇದಕರೆ. ಎಲ್ಲ ವಿಷಯದಲ್ಲೂ ರಾಜಕೀಯ ಮಾಡುವ ಸಣ್ಣತನ ಅವರಲ್ಲಿ ಇರಲಿಲ್ಲ ಎಂದರು.

ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ನೇತಾರನಿಗೆ  ಶ್ರದ್ಧಾಂಜಲಿ.  ಈ ಹಿಂದೆ ಡಾ । ವಿ.ಎಸ್ ಆಚಾರ್ಯ ನಿಧನರಾದಾಗ ಕಾಂಗ್ರೆಸ್ ಭವನದಲ್ಲಿ  ಶ್ರದ್ಧಾಂಜಲಿ ಸಭೆ ನಡೆಸಿದ್ದನ್ನು ಇಲ್ಲಿ ಸ್ಮರಿಸ ಬಹುದು.   

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್‌ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ಹಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ರಾಜ್ಯ. ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್‌ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟ, ಸದಾನಂದ ಉಪ್ಪಿನಕುದ್ರು, ವಿಭಾಗ ಪ್ರಭಾರಿ ಉದಯಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.     

 
 
 
 
 
 
 
 
 
 
 

Leave a Reply