ಭದ್ರಗಿರಿ: ಭಜನಾ ಏಕಾಹ ಮಹೋತ್ಸವ

ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಕಾರ್ತಿಕ ಏಕಾದಶಿಯ ಅಖಂಡ ಭಜನಾ ಏಕಾಹ ಮಹೋತ್ಸವವು ಶ್ರೀ ದೇವತಾ ಪ್ರಾರ್ಥನೆ ಮತ್ತು ದೀಪ ಪ್ರಜ್ವಾಲನದಿಂದ ಬೆಳಿಗ್ಗೆ ಪ್ರಾರಂಭಗೊಂಡಿತು.ಆಡಳಿತೆ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ, ಗೌರಾವಾಧ್ಯಕ್ಷ ನಾಗರಮಠ ಮಂಜುನಾಥ ನಾಯಕ್ ,ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಾದ ಸತೀಶ ಕಿಣಿ ಬೆಳ್ವೆ, ಪ್ರಭಾಕರ ಭಟ್, ಗಣೇಶ ಪೈ ಪರ್ಕಳ, ಉದಯ ಪಡಿಯಾರ್, ಮಹೇಶ ಆಚಾರ್ಯ, ಗಿರಿಧರ ರಾವ್ , ಭದ್ರಗಿರಿ ವೀರವಿಠ್ಠಲ ಭಜನಾ ಮಂಡಳಿಯ ಸದಸ್ಯರಾದ ಕೆ ಸಿ ಪ್ರಭು, ಸಿ.ಕೃಷ್ಣ ಪೈ, ಕೆ.ಪಿ.ಕಿಣಿ ,ಪುಷ್ಖರ ಭಟ್, ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ ಭಟ್ ಮತ್ತು ಅರ್ಚಕಕರಾದ ಸದಾನಂದ ಆಚಾರ್ಯ ಮತ್ತು ಭಜಕರು ಉಪಸ್ಥಿತರಿದ್ದರು .ಅಖಂಡ ಭಜನಾ ಮಹೋತ್ಸವದಲ್ಲಿ ಊರ ಪರ ಊರಿನ 14 ಭಜನಾ ಮಂಡಳಿಗಳು ಪಾಲ್ಗೊಂಡು ಭಜನಾ ಸೇವೆ ಸಲ್ಲಿಸಿದವು. ಸಂಜೆ ದೀಪೋತ್ಸವ ಮತ್ತು ರಾತ್ರಿಯ ಪ್ರಸನ್ನಪೂಜೆಯಿಂದ ಭಜನಾ ಮಂಗಲೋತ್ಸವ ಸಂಪನ್ನಗೊಂಡಿತು.

 
 
 
 
 
 
 
 
 
 
 

Leave a Reply