ಮಲ್ಪೆ ಭಗವಾನದಾಸ್ ಇನ್ನಿಲ್ಲ. 

ಹಿರಿಯ ಕಾಂಗ್ರೆಸಿಗ, ಶ್ರೀಮತಿ ಮನೋರಮಾ ಮದ್ವರಾಜ್ ಮತ್ತು ಶ್ರೀ ಆಸ್ಕರ್ ಫೆರ್ನಾಂಡಿಸ್ ಅವರ ನಿಕಟ ಸಹವರ್ತಿ, ಉಡುಪಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮಲ್ಪೆ ಭಗವಾನದಾಸ್ (73ವ) ಇನ್ನಿಲ್ಲ.  

ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ತಮ್ಮ ಸೇವಾವಧಿಯಲ್ಲಿ ಬ್ಯಾಂಕ್ ಯೂನಿಯನ್‌ನ ನಾಯಕರಾಗಿ, ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಿಂಡಿಕೇಟ್ ಬ್ಯಾಂಕ್,  ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ನೇತೃತ್ವ ವಹಿಸಿದ್ದ ಅವರು ಕೊನೆಯವರೆಗೂ ಸಾಮಾಜಿಕ ಕಳಕಳಿಗಾಗಿ ಹೋರಾಟ ನಡೆಸಿದರು. 

ಅವಿವಾಹಿತರಾಗಿದ್ದ ಅವರು  ತಾಯಿ ಸಹೋದರ ಸಹೋದರಿಯರು, ಅಪಾರ ಸಂಖ್ಯೆಯ ಹಿತೈಷಿಗಳನ್ನು ಅಗಲಿದ್ದಾರೆ

 
 
 
 
 
 
 
 
 
 
 

Leave a Reply