ಪೂಜೆ ಮುಗಿಸಿ ತೀರ್ಥದ ಜೊತೆಗೆ ಬಾಲಕೃಷ್ಣನನ್ನೇ ಗುಳುಂ ಮಾಡಿದ ಭಕ್ತ

ದೇವರ ಪೂಜೆ ಬಳಿಕ ತೀರ್ಥದ ಜೊತೆ ಬಾಲಕೃಷ್ಣನ ಲೋಹದ ಮೂರ್ತಿಯನ್ನೇ ನುಂಗಿ ಯಡವಟ್ಟು ಮಾಡಿಕೊಂಡಿರುವ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.
ಸುಮಾರು 45 ವರ್ಷದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಮೂರ್ತಿಯನ್ನು ನುಂಗಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆಯಲಾಗಿದೆ.

ನಿತ್ಯ ಪೂಜೆ ಬಳಿಕ ತೀರ್ಥ ಸೇವಿಸುವ ಪದ್ಧತಿಯಂತೆ ಇವರು ತೀರ್ಥ ಸೇವಿಸಿದ್ದರು. ಅದಾದ ಬಳಿಕ ಗಂಟಲಲ್ಲಿ ಊತ ಹಾಗೂ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರು ಪರೀಕ್ಷೆಗೊಳಪಡಿಸಿದ್ದರು. ಹೆಚ್ಚಿನ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಎಕ್ಸ್‌ರೇ ಮಾಡಲು ಸಲಹೆ ಮಾಡಿದ್ದರು. ಎಂಡೋಸ್ಕೋಪ್‌ನಲ್ಲಿ ಮೂರ್ತಿಯ ಕಾಲು ಆಹಾರ ನಾಳದಲ್ಲಿ ಸಿಲುಕಿರುವುದು ಪತ್ತೆಯಾಗಿದ್ದು, ಇಎನ್‌ಟಿ ವಿಭಾಗದ
ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಗಂಟಲಿನಲ್ಲಿ ಸಿಲುಕಿದ್ದ ವಿಗ್ರಹ ಹೊರತೆಗೆದಿದ್ದಾರೆ.

 
 
 
 
 
 
 
 
 
 
 

Leave a Reply