ಬೇಬಿ ಸೇವಾಶ್ರಮ~ ಹಿರಿಯ ನಾಗರಿಕರ  ಪುನರ್ವಸತಿ ಕೇಂದ್ರ ಆರಂಭ

ಅಂಬಲಪಾಡಿಯಲ್ಲಿ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ಕಾಟಿಪಳ್ಳ್ ಇದರ ಅಂಗ ಸಂಸ್ಥೆ  ನೂತನ ಬೇಬಿ ಸೇವಾಶ್ರಮ ಹಿರಿಯ ನಾಗರಿಕರ ಪುನರ್ವಸತಿ  ಕೇಂದ್ರದ ಶುಭಾರಂಭ. 
ಮುಖ್ಯ ಅತಿಥಿಗಳಾದ ಮಾನವ ಹಕ್ಕು ಸಂರಕ್ಷಣಾ ವೇದಿಕೆ ಅಧ್ಯಕ್ಷ ಡಾ ರವೀಂದ್ರ ನಾಥ ಶಾನ್ ಬೋಗ ಉದ್ಘಾಟನೆ ಯನ್ನು ದೀಪ ಬೆಳಗಿಸಿ  ಚಾಲನೆ ನೀಡಿ  ಹಿರಿಯ ನಾಗರಿಕರ ರಕ್ಷಣೆ ಹೊಣೆ ಸರ್ಕಾರದ್ದು ಕಾನೂನಿನಲ್ಲಿ  ವ್ಯವಸ್ಥೆ ಇದ್ದರೂ ಕೊಡ ಇದುವರೆಗೆ ಯಾವುದೇ ಸಂಸ್ಥೆಯನ್ನು ತೆರದಿಲ್ಲ  ತಕ್ಷಣ ಈ ಕಾರ್ಯ ಆರಂಭಿಸುವಂತೆ ಒತ್ತಾಯಿಸಿದರು. 
ಎ. ವಿ. ಬಾಳಿಗಾ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾಕ್ಟರ್ ಪಿ.ವಿ. ಭಂಡಾರಿ  ಮಾತನಾಡಿ ಈ ರೀತಿಯ ಸಂಸ್ಥೆಯಿಂದ ನೊಂದ ಅನಾಥರಿಗೆ ಆಶ್ರಯ ತಾಣವಾಗಲಿ ಶುಭ ಹಾರೈಸಿದರು.
ಮಹಾಕಾಳಿ ಜನಾರ್ಧನ ದೇವಳದ ಧರ್ಮದರ್ಶಿ ಡಾ ವಿಜಯ ಬಲ್ಲಾಳ, ಮಕ್ಕಳ ಕಲ್ಯಾಣ ಸಮಿತಿ ಉಡುಪಿ ಇದರ ಮಾಜಿ ಅಧ್ಯಕ್ಷ ಬಿ.ಕೆ. ನಾರಾಯಣ್, ಸಮಾಜ ಸೇವಕ ಶ್ರೀಮತಿ ಐರಿನ್ ಕೆಸ್ಟೋ ಲಿನ್, ಸಮಾಜ ಸೇವಕ ವಿಷು ಶೆಟ್ಟಿ ಅಂಬಲಪಾಡಿ ಶ್ರೀ ಗುರು ಚೈತನ್ಯ  ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹೊನ್ನಯ್ಯ ಕಾಟಿಪಳ್ಳ ಸ್ವಾಗತಿಸಿದರು. 
ಬೇಬಿ ಸೇವಾಶ್ರಮದ ಆಡಳಿತ ನಿರ್ದೇಶಕ  ಬಬಿತಾ ರಾಜೇಶ್ ಶೆಟ್ಟಿ, ಮತ್ತು ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು 
 
 
 
 
 
 
 
 
 
 
 

Leave a Reply