ಕಂದಾಯ ಸಚಿವರ ಗ್ರಾಮ ವಾಸ್ತವ್ಯ : 1000 ಕ್ಕೂ ಅಧಿಕ ಮಂದಿಗೆ ಸವಲತ್ತು ವಿತರಣೆ

ಉಡುಪಿ, ಫೆಬ್ರವರಿ 18 (ಕವಾ) : ಪೆಬ್ರವರಿ 19 ರಂದು ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮದಲ್ಲಿ ನಡೆಯುವ ರಾಜ್ಯದ ಕಂದಾಯ ಸಚಿವ ​​ಆರ್. ಅಶೋಕ್ ಅವರ ಜನಸ್ಪಂದನ ಕಾರ್ಯಕ್ರಮದಲ್ಲಿ 1000 ಕ್ಕೂ ಅಧಿಕ ಮಂದಿಗೆ ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ವಿತರಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಅವರು ಇಂದು ಕೊಕ್ಕರ್ಣೆಯ ಕೆಪಿಎಸ್ ಶಾಲೆಯಲ್ಲಿ, ಕಂದಾಯ ಸಚಿವರ ಜನಸ್ಪಂದನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಕುರಿತು ಕೈಗೊಂಡಿರುವ ಸಿದ್ದತೆಗಳ ಕುರಿತು ಪರಿಶೀಲನಾ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು. ಕಂದಯ ಸಚಿವರು ಪೆಬ್ರವರಿ 19 ರಂದು ಮಧ್ಯಾಹ್ನ 12.30 ಗಂಟೆಗೆ ಕೊಕ್ಕರ್ಣೆ ಬಸ್ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಅವರನ್ನು ವಿವಿಧ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆಯಲ್ಲಿ, ಎತ್ತಿನ ಬಂಡಿ ಮೂಲಕ, ಗ್ರಾಮಸ್ಥರೊಂದಿಗೆ ಕೊಕ್ಕರ್ಣಿಯ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ಸ್ಥಳಕ್ಕೆ ಕರೆತರಲಾಗುವುದು.

ಮೊದಲಿಗೆ ಸಚಿವರು ಪಶು ಸಂಗೋಪನೆ ಇಲಾಖೆಯಿಂದ ವ್ಯವಸ್ಥೆ ಮಾಡಲಾದ ಇಲಾಖೆಯ ಸ್ಟಾಲ್ ನ್ನು ಗೋಪೂಜೆಯ ಮೂಲಕ ಪ್ರಾರಂಭಿಸಿ , ನಂತರ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಕಿರುವ ಸ್ಟಾಲ್ ಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಭೋಜನಾ ವಿರಾಮದ ನಂತರ , ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ , ಉಡುಪಿ ವಿಧಾನ ಸಭಾ ಕ್ಷೇತ್ರ ಹಾಗೂ ಬ್ರಹ್ಮಾವರ ತಾಲೂಕಿನ ವಿವಿಧ ಇಲಾಖೆಗಳಾದ, ಕಂದಾಯ ಇಲಾಖೆ ವತಿಯಿಂದ 350 ಫಲಾನುಭವಿಗಳಿಗೆ ಸಾಮಾಜಿಕ ಯೋಜನೆಗಳ ಆದೇಶ ಪ್ರತಿಗಳನ್ನು, 15 ಫಲಾನುಭವಿಗಳಿಗೆ ರಾಷ್ಟ್ರೀಯ ಭದ್ರತಾ ಯೋಜನೆಯ ಪರಿಹಾರ ಚೆಕ್ ಗಳನ್ನು, 572
ಜನರಿಗೆ ಬಿಪಿಎಲ್ ಕಾರ್ಡ್ ಗಳನ್ನು ವಿತರಣೆ ಮಾಡಲಿದ್ದು, ಇದಲ್ಲದೆ ಕೃಷಿ ಇಲಾಖೆ ಮೂಲಕ 7 ಫಲಾನುಭವಿಗಳಿಗೆ, ಟ್ರಾಕ್ಟರ್ ಮತ್ತು ಟಿಪ್ಪರ್ ಗಳನ್ನು ಮತ್ತು ತೋಟಗಾರಿಕೆ ಇಲಾಖೆಯಿಂದ 5 ಫಲಾನುಭವಿಗಳಿಗೆ ಸವಲತ್ತುಗಳನ್ನು, ಪಶುಸಂಗೋಪನಾ ಇಲಾಖೆಯಿಂದ 3 ಜನ, ಮೀನುಗಾರಿಕೆ ಇಲಾಖೆಯಿಂದ 5, ತಾಲೂಕು ಪಂಚಾಯತಿನಿAದ 47 ಜನರಿಗೆ ಮತ್ತು ಆರೋಗ್ಯ
ಇಲಾಖೆಯಿಂದ 30 ಜನರಿಗೆ ಹಾಗೂ ಮತ್ತು ಹಿಂದುಳಿದ ವರ್ಗ ಕಾರ್ಪೊರೇಶನ್ ವತಿಯಿಂದ 3 , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಿಂದ 60, ಸಮಾಜ ಕಲ್ಯಾಣ ಇಲಾಖೆಯಿಂದ 4, ಐಟಿಡಿಪಿ ಯಿಂದ 3 ಜನ ಮತ್ತು ಆಹಾರ ಇಲಾಖೆಯಿಂದ 10, ಅಂಗವಿಕಲ ಇಲಾಖೆಯಿಂದ 26 ಶ್ರವಣ ಸಾಧನಗಳು ಸೇರಿದಂತೆ 1000ಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿವಿಧ ಸಾಲತ್ತುಗಳನ್ನು ನೀಡಲಿದ್ದಾರೆ.

ಸಂಜೆ 4 ಗಂಟೆಗೆ ಡ್ರೀಮ್ಡ್ ಫಾರೆಸ್ಟ್ ಕಾರಣದಿಂದ ಬಾಕಿ ಉಳಿದಿರುವ 94ಸಿ ಮತ್ತು ನಮೂನೆ 50 ಮತ್ತು 53 ರ ಗ್ರಾಮಸ್ಥರು/ ರೈತರೊಂದಿಗೆ ಸಚಿವರು ಸಂವಾದ ಕಾರ್ಯಕ್ರಮ ನಡೆಸಲಿದ್ದು, ಸಂಜೆ 5.00 ಗಂಟೆಗೆ ಕುಡುಬಿ ಜನಾಂಗವರೊAದಿಗೆ ಕೊಕ್ಕಣೆಗೆ ಒಳಬೈಲುವಿನಲ್ಲಿ ಸಮಾಲೋಚನೆ ನಡೆಸಿ, 6 ಗಂಟೆಗೆ ಆಲೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅದೇ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಆ ಬಳಿಕ ವಸತಿ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಪೆಬ್ರವರಿ 20 ರಂದು ಬೆಳಿಗ್ಗೆ ಕಂಜೂರು ಗ್ರಾಮದ ಕೊರಗ ಸಮುದಾಯದ ಜನರ ಮನೆಯಲ್ಲಿ ಉಪಾಹಾರ ಸೇವನೆ ಮಾಡಿ, ಅವರೊಂದಿಗೆ ಸಮಾಲೋಚನೆ ಮಾಡಲಿದ್ದಾರೆ , ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಎಲ್ಲಾ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದು, ಗ್ರಾಮಸ್ಥರು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸವಲತ್ತುಗಳನ್ನು
ಪಡೆದುಕೊಳ್ಳುವಂತೆ ಹಾಗೂ ಅಹವಾಲುಗಳನ್ನು ಸಲ್ಲಿಸುವಂತೆ ರಘುಪತಿ ಭಟ್ ಹೇಳಿದರು.

ಕಂದಾಯ ಸಚಿವರ ಜನಸ್ಪಂದನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳ ಯಶಸ್ಸಿಗಾಗಿ ಈಗಾಗಲೇ ನಿಯೋಜಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಸಭೆಯಲ್ಲಿ ಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಸಹಾಯಕ ಕಮೀಷನರ್ ಕುಂದಾಪುರ ರಾಜು ಬ್ರಹ್ಮಾವರ ತಹಸೀಲ್ದಾರರು ರಾಜಶೇಖರ ಮೂರ್ತಿ ಸೇರಿದಂತೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು,
ಗ್ರಾಮಕರಣಿಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply