ಅಸಹಾಯಕ ಸ್ಥಿತಿಯಲ್ಲಿದ್ದ ಕಿವುಡ ಮೂಗ ಯುವಕನ ರಕ್ಷಣೆ

ಮಾನಸಿಕ ಸ್ಥಿಮಿತ ಕಳೆದುಕೊಂಡು ಒಂದು ವಾರಗಳಿಂದ ಅಸಹಾಯಕ ಸ್ಥಿತಿಯಲ್ಲಿದ್ದ ಕಿವುಡ ಹಾಗೂ ಮೂಗ ಯುವಕ ನೋರ್ವನನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಇತ್ತೀಚೆಗೆ ತಲ್ಲೂರು ಎಂಬಲ್ಲಿ ನಡೆದಿದೆ.

ತಲ್ಲೂರು ಪರಿಸರದಲ್ಲಿ ಕೆಲ ದಿನಗಳಿಂದ ತಿರುಗಾಡುತ್ತಿದ್ದ ಯುವಕನನ್ನು ಸ್ಥಳೀಯ ಆಟೋ ರಿಕ್ಷಾ ಚಾಲಕರು ಗಮನಿಸಿದರು. ಆತನನ್ನು ವಿಚಾರಿಸಿದಾಗ ಆತನಿಗೆ ಬಾಯಿ ಮತ್ತು ಕಿವಿ ಕೇಳದೆ ಇರುವುದು ತಿಳಿದುಬಂತು. ಇದರಿಂದ ಅವರಿಗೆ ಆತನ ಹೆಸರು, ಊರು, ವಿಳಾಸ ತಿಳಿಯಲು ಸಾಧ್ಯವಾಗಲಿಲ್ಲ. ಅಲ್ಲದೆ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡ ಆತ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದನು. ಅಸಹಾಯಕ ಸ್ಥಿತಿಯಲ್ಲಿದ್ದ ಈ ಯುವಕನಿಗೆ ಸ್ಥಳೀಯರು ಆಶ್ರಯ ಕಲ್ಪಿಸಿದರು.

ಬಳಿಕ ಈ ಕುರಿತು ಉಡುಪಿಯ ಸಾಮಾಜಿಕ ಕಾರ್ಯ ಕರ್ತ ನಮ್ಮ ಭೂಮಿಯ ರಾಮಾಂಜಿ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ರಾಮಾಂಜಿ ಆ ಯುವಕನನ್ನು ಕಾರ್ಕಳದ ಪಳ್ಳಿ ಎಂಬಲ್ಲಿರುವ ಹೊಸಬೆಳಕು ಆಶ್ರಮದಲ್ಲಿ ಆಶಯ ಕಲ್ಪಿಸುವಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಆಶ್ರಮದ ಸಂಸ್ಥಾಪಕರಾದ ತನುಲಾ ತರುಣ್, ವಿನಯಚಂದ್ರ ಸಾಸ್ತಾನ, ತಲ್ಲೂರಿನ ಸ್ಥಳೀಯರಾದ ವಿಜಯ ಖಾರ್ವಿ, ಅನಿಲ್ ಖಾರ್ವಿ, ಮಹೇಶ್ ಹಾಜರಿದ್ದರು

 
 
 
 
 
 
 
 
 
 
 

Leave a Reply