ಶ್ರೀ ಸೀತಾರಾಮಂಜೇನೆಯ ದೇವಸ್ಥಾನ ಆಗುಂಬೆ , ಇದರ ಪುನರ್ ಪ್ರತಿಷ್ಠಾಪನೆಯ ಅಂಗವಾಗಿ ದಿನಾಂಕ 17-2-22 ಗುರುವಾರ ಬೆಳ್ಳಿಗೆ 8 ಗಂಟೆಗೆ ಕಾಶೀಮಠ ದೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಶ್ರೀಪಾದರನ್ನು ದೇವಾಲಯದ ವತಿಯಿಂದ ಪೂರ್ಣ ಕುಂಭ ಸ್ವಾಗತ ನೀಡಿ ಬರಮಾಡಿಕೊಂಡು ದೇವಳದ ಅಭಿವೃದ್ಧಿ ಬಗ್ಗೆ ವಿವರಣೆ ನೀಡಿ ಈ ಹಿಂದೆ ಹಿರಿಯ ಯತಿಗಳಿಂದ ಉದಾಘಾಟನೆ ಗೊಂಡು ಸ್ಮರಿಸಲಾಯಿತು ಬಳಿಕ ಕಾಶೀಮಠ ದೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಅನುಗ್ರಹಿಸಿದರು ದೇವಳದ ಆಡಳಿತ ಮೊಕ್ತೇಶ್ವರ ಶ್ರೀನಿವಾಸ ಮೂರ್ತಿ , ಪೇಟೆಯ ಹತ್ತು ಸಮಸ್ತರಿಂದ ಶ್ರೀಗಳ ಪಾದ ಪೂಜೆ ಗುರು ಕಾಣಿಕೆ ಅರ್ಪಿಸಿದರು.
ತೀರ್ಥಹಳ್ಳಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತು ತೀರ್ಥಹಳ್ಳಿ ಲಕ್ಷೀವೇಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಯುತ ಬಾಳೆಬೈಲು ರಾಘವೇಂದ್ರ ನಾಯಕ್,
ಶ್ರೀಲಕ್ಷೀವೆಂಕಟರಮಣ ದೇವಸ್ಥಾನದ ಕಾರ್ಯದರ್ಶಿ ಶ್ರೀಯುತ ನಂದಕಿಶೋರ ಕಾಮತ್,
ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಖಚಾಂಜಿ ಶ್ರೀಯುತ ಎಸ್ ನಾಗರಾಜ ಪ್ರಭು, ಆಡಳಿತ ಮಂಡಳಿ ಸದಸ್ಯರಾದ ಲಕ್ಷೀನಾರಾಯಣ ಹೆಗಡೆ, ಕೃಷ್ಣವಾಮನ ಪ್ರಭು,
ತೀರ್ಥಹಳ್ಳಿ ಜಿಎಸ್ ಬಿ ಸಭಾದ ಉಪಾಧ್ಯಕ್ಷರಾದ ಮಂಜುನಾಥ ಮಲ್ಯ,
ಆಗುಂಬೆ ಗ್ರಾಮದೇವತೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕರಾದ ವಿಷ್ಣುಮೂರ್ತಿಭಟ್, ಉಡುಪಿಯ ವಿಶ್ವನಾಥಶೆಣೈ ದಂಪತಿ, ಸೋಮೇಶ್ವರ ವೇಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಯೋಗಿಶ್ ಭಟ್ ಹಾಗೂ ಕಾರ್ಯದರ್ಶಿ ರಾಘು ಭಕ್ತ ಮತ್ತು ನೂರಾರು ಭಕ್ತರೂ ಉಪಸ್ಥರಿದ್ದರು