ರಾಜೀನಾಮೆ ರಹಸ್ಯ ಬಿಚ್ಚಿಟ್ಟ ‘ಸಿಂಗಂ’ ಅಣ್ಣಾಮಲೈ!

ಚಿಕ್ಕಮಗಳೂರು: ಕರ್ನಾಟಕದಲ್ಲಿ ತನ್ನದೇ ಛಾಪು ಮೂಡಿಸಿ, ಕರುನಾಡ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ IPS ಅಧಿಕಾರಿ ಅಣ್ಣಾಮಲೈ ಕೊನೆಗೂ ತಾವು ರಾಜೀನಾಮೆ ನೀಡಿದ್ದು ಯಾಕಾಗಿ ಎಂದು ಹೇಳಿದ್ದಾರೆ. ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕೆಫೆ ಕಾಫೀ ಡೇ ಒಡೆಯ ದಿ. ಸಿದ್ಧಾರ್ಥ ಹೆಗಡೆ ಪುತ್ಥಳಿ ಲೋಕಾರ್ಪಣೆ ಗೊಳಿಸಿದ ಸಂದರ್ಭ ತಾವು ನೀಡಿದ ರಾಜೀನಾಮೆಗೆ ನಿಜ ಕಾರಣವನ್ನು ಬಾಯ್ಬಿಟ್ಟಿದ್ದಾರೆ.

ಉದ್ಯಮಿ ಸಿದ್ಧಾರ್ಥ ಮತ್ತು ಅಣ್ಣಾಮಲೈ ನಡುವೆ ಉತ್ತಮ ಬಾಂಧವ್ಯವಿತ್ತು. ಸಿದ್ಧಾರ್ಥ ಅಣ್ಣ ಹೇಳಿದ್ದಕ್ಕೆ ನಾನು ರಾಜೀನಾಮೆ ನೀಡಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಡಿಐಜಿ ಆಗಿ, ಐಜಿ ಆಗಿ ಕೆಲಸ ಮಾಡುವುದಕ್ಕೆ ನನಗೆ ಅಷ್ಟೊಂದು ಆಸಕ್ತಿಯಿರಲಿಲ್ಲ. ಹಾಗೆ AC ರೂಂ​ನಲ್ಲಿ ಕುಳಿತು ಕೆಲಸ ಮಾಡಲು ಆಸಕ್ತಿ ಇರಲಿಲ್ಲ. ನನಗೆ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವ ಧ್ಯೇಯವಿತ್ತು.

ಹಾಗಾಗಿ, ರಾಜೀನಾಮೆ ಕೊಡಬೇಕಾ, ಬೇಡ್ವಾ? ಎಂಬ ಗೊಂದಲದಲ್ಲಿದ್ದೆ ಎಂದು ತಮ್ಮ ಆ ದಿನಗಳ ಬಗ್ಗೆ ಅಣ್ಣಾಮಲೈ ಹೇಳಿದರು. ಇದೇ ವೇಳೆ, ಸಿದ್ಧಾರ್ಥ ಅಣ್ಣ ರಾಜೀನಾಮೆ ಕೊಡಲು ಸಲಹೆ ನೀಡಿದ್ದರು. ಧೈರ್ಯವಾಗಿ ರಾಜೀನಾಮೆ ಕೊಡು ನಾನಿದ್ದೇನೆ ಎಂದರು. ಹೀಗಾಗಿ, ರಾಜೀನಾಮೆ ದಿನವನ್ನೂ ಇಬ್ಬರೂ ಕುಳಿತು ನಿಗದಿಪಡಿಸಿದ್ವಿ.

ಇದರೊಂದಿಗೆ, ರಾಜೀನಾಮೆ ಬಳಿಕ ಜನ ನಿಮ್ಮನ್ನ ಮೂರ್ಖರು ಅನ್ನಬಹುದು, ಆದ್ರೆ ನಿಮ್ಮ ಉದ್ದೇಶ ನಾನು ಬಲ್ಲೆ ಹಾಗಾಗಿ ಮುಂದುವರಿಯಿರಿ ಅಂದಿದ್ರು ಎಂದು ಅಣ್ಣಾಮಲೈ ರಾಜೀನಾಮೆ ನೀಡಿದ ಹಿಂದಿನ ಅಸಲಿ ಸತ್ಯ ಬಯಲು ಮಾಡಿದ್ದಾರೆ.

ದಿ. ಸಿದ್ಧಾರ್ಥ ಹೆಗಡೆ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ IPS​ ಅಧಿಕಾರಿ ಅಣ್ಣಾಮಲೈ ಚೆನ್ನೈನಿಂದ ಆಗಮಿಸಿದ್ದರು.ಡಾ. ನಿರ್ಮಲಾನಂದನಾಥ ಸ್ವಾಮೀಜಿರು ಪುತ್ಥಳಿಯನ್ನು ಲೋಕಾರ್ಪಣೆ ಗೊಳಿಸಿದರು. ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಹ ಉಪಸ್ಥಿತರಿದ್ದರು.

ಕರುನಾಡ ಸಿಂಗಂ ನ ಅಭಿಮಾನಿಗಳ ಸಂಖ್ಯೆ ಕಿಂಚಿತ್ತೂ ಕಮ್ಮಿಯಾಗಿಲ್ಲ, ಸಾರ್ವಜನಿಕರು ಮಾಜಿ ಅಧಿಕಾರಿ ಯಾದ್ರು ಇವರನ್ನು ಅದೇ ಅಭಿಮಾನದಿಂದ ಕಾಣುತ್ತಾರೆ. ಹಾಗೆ ಇದರಲ್ಲಿ ಪೊಲೀಸರು ಸಹ ಇದ್ದಾರೆ. ಹೌದು, ಮಾಜಿ ಅಧಿಕಾರಿಯನ್ನು ಕಂಡ ಕೂಡಲೇ ಜನಸಾಮಾನ್ಯರು ಮತ್ತು ಪೊಲೀಸರು ನಾ ಮುಂದು ತಾ ಮುಂದು ಎಂದು ಅಣ್ಣಾಮಲೈ ಒಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ದಯವಿಟ್ಟು ಸರ್, ಒಂದು ಸೆಲ್ಫಿ ಅಂತಾ ಫೋಟೋ ತೆಗೆಸಿಕೊಂಡರು.

 
 
 
 
 
 
 
 
 
 
 

Leave a Reply